ಪೆರ್ಲ : ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಪೆರ್ಲದ ದಾಮೋದರ ಮೂಲ್ಯ ಬಜಕೂಡ್ಲು ಇವರ ತಾಯಿಯ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸಂಸ್ಥೆಯ ವತಿಯಿಂದ ನೀಡಲಾಗುವ ಸಹಾಯಧನದ ಮೊತ್ತ ₹ 50,000/ದ ಚೆಕ್ ನ್ನು ವಿತರಿಸಲಾಯಿತು. ಸಂಸ್ಥೆಯ ಗೌರವಾನ್ವಿತ ನಿರ್ದೇಶಕ ವೆಂಕಟರಮಣ ಭಟ್ ಇವರು ಸದಸ್ಯರ ಮನೆಗೆ ತೆರಳಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾದ ಚಂದ್ರ ಎಂ. ಬದಿಯಡ್ಕ ಮತ್ತು ಶಾಖಾ ವ್ಯವಸ್ಥಾಪಕರಾದ ಶ್ಯಾಂ ಪ್ರಶಾಂತ ಬದಿಯಡ್ಕ ಉಪಸ್ಥಿತರಿದ್ದರು.

0 Comments