ಕುಂಬಳೆ : ಹುತಾತ್ಮ ಕಾಮ್ರೇಡ್ ಭಾಸ್ಕರ ಕುಂಬಳೆ ಅವರ 29ನೇ ಹುತಾತ್ಮ ದಿನದ ಅಂಗವಾಗಿ ಕುಂಬಳೆ ಶೇಡಿಕ್ಕಾವು ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಹಾಗೂ ಸಂಸ್ಮರಣಾ ಸಭೆ ನಡೆಯಿತು. ಬ್ಲಾಕ್ ಅಧ್ಯಕ್ಷ ಮಜೀದ್ ಧ್ವಜಾರೋಹಣ ಮಾಡಿದರು.
ಸಂಸ್ಮರಣಾ ಸಭೆಯನ್ನು ಸಿ.ಪಿ.ಐ.ಎಂ. ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಸಿ.ಎಚ್. ಕುಂಞಂಬು ಉದ್ಘಾಟಿಸಿದರು. ಬ್ಲಾಕ್ ಕಾರ್ಯದರ್ಶಿ ವಿಶ್ವರಾಜ್ ಸ್ವಾಗತಿಸಿದರು.
ಸಿ.ಪಿ.ಐ.ಎಂ. ಡಿವೈಎಫ್ಐ ಮುಖಂಡರಾದ ಕೆ.ಆರ್. ಜಯಾನಂದ, ವಿ.ವಿ. ರಮೇಶ್, ಸಿ.ಎ. ಸುಬೈರ್, ರಜೀಶ್ ವೆಳ್ಳಾಟ್, ಶಾಲು ಮ್ಯಾಥ್ಯೂ, ರಘುದೇವ ಮಾಸ್ತರ್, ನಸಿರುದ್ದೀನ್ ಮಲಙರ, ಸಾದಿಕ್ ಚೆರುಗೋಳಿ, ಶಿವಪ್ರಸಾದ್, ಸುಭಾಷ್ ಪಾಡಿ, ರಂಜಿತ್ ಪಿ., ಮತ್ತು ವಿನಯ್ ಕುಮಾರ್ ಬಾಯಾರ್ ಮಾತನಾಡಿದರು.

.jpeg)
0 Comments