Ticker

6/recent/ticker-posts

ಕವಿ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ವಾಚನ ದಿನಾಚರಣೆ

 


ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತಿನ  ನಾಡೋಜ, ಡಾ. ಕವಿ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ  ಪಿ. ಎನ್. ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ದಿನವವನ್ನಾಗಿ ಆಚರಿಸಲಾಯಿತು . ಗ್ರಂಥಾಲಯ ಸಮಿತಿಯ ಅಧ್ಯಕ್ಷ  ರಾಜೀವ್ ಪಿ.ವಿ.ಡಿ ಅಧ್ಯಕ್ಷತೆ ವಹಿಸಿದ್ದರು. ಕಥೆಗಾರ , ಸಾಹಿತಿ ರಾಜನ್ ಮುನಿಯೂರು ಕಾರ್ಯಕ್ರಮ ಉಧ್ಘಾಟಿಸಿದರು. ಗ್ರಾ.ಪಂ.ಸದಸ್ಯ ಶ್ಯಾಮಪ್ರಸಾದ್ ಮಾನ್ಯ , ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ,ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ಭಟ್ ಪೆರುಮುಖ , ನಿವೃತ್ತ ಅಧ್ಯಾಪಕ ಚಂದ್ರಹಾಸ ಮಾಸ್ಟರ್ ,ಗ್ರಂಥಾಲಯ ಸಮಿತಿಯ ಖಜಾಂಜಿ ಹಮೀದ್ ಕೆಡೆಂಜಿ , ಬದಿಯಡ್ಕ ಪಂಚಾಯತು ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಗೋಪಾಲ.ಡಿ ಮಾತನಾಡಿದರು. ಸಾವನ್ ಬಾರಡ್ಕ ಉಪಸ್ಥಿತರಿದ್ದರು . ಗ್ರಂಥಾಲಯ ಸಮಿತಿಯ ಕಾರ್ಯದರ್ಶಿ ಸುಂದರ ಬಾರಡ್ಕ ಸ್ವಾಗತಿಸಿ , ಜತೆ ಕಾರ್ಯದರ್ಶಿ ರಾಮ ಪಟ್ಟಾಜೆ ವಂದಿಸಿದರು .

Post a Comment

0 Comments