Ticker

6/recent/ticker-posts

ನೆರೆಮನೆಗೆ ತೆಂಗಿನಕಾಯಿ ಕೊಯ್ಯಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆ


 ಬದಿಯಡ್ಕ: ನೆರೆಮನೆಗೆ ತೆಂಗಿನಕಾಯಿ ಕೊಯ್ಯಲೆಂದು  ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ  ಬಾಂಜತ್ತಡ್ಕ ಬಳಿಯ ಇಕ್ಕೇರಿ ನಿವಾಸಿ ವಿ.ವಿ.ಪ್ರಕಾಶ್ ನಾಪತ್ತೆಯಾದ ವ್ಯಕ್ತಿ. ಜುನ್ 18 ರಂದು ಮದ್ಯಾಹ್ನ 2.3೦ ಕ್ಕೆ  ಇವರು ಮನೆಯಿಂದ ನೆರೆಮನೆಗೆ ಹೋಗಿವುದಾಗಿ ಹೇಳಿ ಹೊರಟಿದ್ದರು. ಆದರೆ ನೆರೆಮನೆಗೆ ತಲುಪಿರಲಿಲ್ಲ. ಇವರ ಮೊಬೈಲು ಫೋನು ಬದಿಯಡ್ಕದ ಅಂಗಡಿಯೊಂದರಲ್ಲಿ ದುರಸ್ತಿಗಾಗಿ ನೀಡಲಾಗಿದೆ. ಈ ಬಗ್ಗೆ ಪತ್ನಿ ಊರ್ವಶಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಪ್ರಕಾಶನ್, ಕಾಞಂಗಾಡ್ ಅಂಬಲತ್ತರ ನಿವಾಸಿಯಾಗಿದ್ದಾನೆ

Post a Comment

0 Comments