ಕುರುಡಪದವು: ಹಿರಿಯ ಪ್ರಾಥಮಿಕ ಶಾಲೆ ಕುರುಡಪದವಿನಲ್ಲಿ ವಾಚನಾ ದಿನ, ವಾಚನಾ ವಾರದ ಔಪಚಾರಿಕ ಉದ್ಘಾಟನೆ ಜೂನ್ 19ನೇ ತಾರೀಕಿನಂದು ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತಲೇಕಳ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು,ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಆಗಿರುವ ಗೋಪಣ್ಣ ಮಾಸ್ಟರ್ ನಿರ್ವಹಿಸಿದರು.ಉದ್ಘಾಟನಾ ಭಾಷಣದಲ್ಲಿ ಪಿ.ಎನ್.ಪಣಿಕ್ಕರ್ ಗ್ರಂಥಾಲಯಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ವಿವರಿಸಿದರೊಂದಿಗೆ, ಓದು ಮಕ್ಕಳ ನಿತ್ಯ ಹವ್ಯಾಸವಾಗಬೇಕೆಂದರು.ಈ ಸಂದರ್ಭದಲ್ಲಿ ಪ್ರತಿ ಮಗುವಿಗೂ ಗ್ರಂಥಾಲಯದಿಂದ ಒಂದೊಂದು ಪುಸ್ತಕ ನೀಡಲಾಯಿತು.ನಂತರಶಾಲಾ ಲೈಬ್ರರಿಗೆ ಗೋಪಣ್ಣ ಮಾಸ್ಟರ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.ಹಿರಿಯ ಶಿಕ್ಷಕರಾದ ಗಿರೀಶ್ ಸರ್ ವಾಚನ ದಿನದ ಪ್ರತಿಜ್ಞೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮನಾಭ ಬರ್ಲಾಯ ಸರ್ ವಹಿಸಿದ್ದು, ಅವರು ಮಾತನಾಡಿ ಓದಿನ ಮಹತ್ವವನ್ನು ಮಕ್ಕಳಿಗೆ ವಿವರಿಸುತ್ತಾ, ಓದು ನಮ್ಮ ಜೀವನಕ್ಕೆ ಬಹಳ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಅಬ್ದು ರಹೀಂ , ಪ್ರಶಾಂತ್ ಕುಮಾರ್, ಯಶಸ್, ಶಿಕ್ಷಕಿಯರಾದ ಹರ್ಷಿತಾ,ಅರ್ಚನಾ,ಶಾಲಾ ಸಿಬ್ಬಂದಿ ಚಿದಾನಂದ ಉಪಸ್ಥಿತರಿದ್ದರು. ಶಾಲಾ ಹಿರಿಯ ಅಧ್ಯಾಪಕರಾದ ಗಿರೀಶ್ ಸರ್ ಸ್ವಾಗತಿಸಿ, ಶಾಲಾ ಗ್ರಂಥಾಲಯ ನಿರ್ವಾಹಕಿಯೂ, ಶಿಕ್ಷಕಿಯೂ ಆದ ಪ್ರಮೀಳಾ ಟೀಚರ್ ಧನ್ಯವಾದವಿತ್ತರು.ಹಿಂದಿ ಅಧ್ಯಾಪಕ ಸತೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.ತದನಂತರ ಎಲ್ಲಾ ಮಕ್ಕಳು ಪುಸ್ತಕ ಪ್ರದರ್ಶನ ವೀಕ್ಷಣೆಯಲ್ಲಿ ಭಾಗಿಯಾದರು.
0 Comments