Ticker

6/recent/ticker-posts

Ad Code

ಶಿಕ್ಷಕರ ದಿನಾಚರಣೆಯ ಅಂಗವಾಗಿ ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ ಶಿಕ್ಷಕಿಯರಿಗೆ ಗೌರವಾರ್ಪಣೆ


 ಬದಿಯಡ್ಕ : ಶಿಕ್ಷಕರ ದಿನಾಚರಣೆಯಂಗವಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುನಂದ ಟೀಚರ್ ಕುಂಬಳೆ , ಶಿರಿಬಾಗಿಲು ಜಿಡಬ್ಲ್ಯುಎಲ್ ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ  ಶಶಿಕಲ ಟೀಚರ್ ಸೂರಂಬೈಲು ಮತ್ತು ಚಾಯೋತ್ ಜಿಎಚ್ಎಸ್ಎಸ್ ನ ಉಪನ್ಯಾಸಕಿ ಆಶಾಕಿರಣ್ ದರ್ಬೆತ್ತಡ್ಕ  ಅವರನ್ನು ಅವರವರ ಸ್ವ ಗೃಹಕ್ಕೆ ತೆರಳಿ ಗೌರವಿಸಲಾಯಿತು. 

ಅಂಬೇಡ್ಕರ್ ವಿಚಾರ ವೇದಿಕೆಯ ವತಿಯಿಂದ  ಕಾರ್ಯಕ್ರಮ ಆಯೋಜಿಸಲಾಗಿತ್ತು . ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ .ಕೆ.ಉಳಿಯತ್ತಡ್ಕ , ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ,

ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ , ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ   ಗಂಗಾಧರ ಗೋಳಿಯಡ್ಕ , ನಿವೃತ್ತ ಸಬ್ ರಿಜಿಸ್ಟ್ರರ್ ರಾಮ ಸೂರಂಬೈಲು ,  ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ , ಕಾರ್ಯದರ್ಶಿ ಸುಂದರ ಬಾರಡ್ಕ , ಸಂದೇಶ್ ಕುಂಬಳೆ , ಅಶ್ವಿನ್ ಕುಂಬಳೆ , ಗೋಪಾಲಕೃಷ್ಣ ದರ್ಬೆತ್ತಡ್ಕ , ಉಷಾಕಿರಣ ದರ್ಬೆತ್ತಡ್ಕ , ನೆಹಾರಿಕ ದರ್ಬೆತ್ತಡ್ಕ ಮೊದಲಾದವರಿದ್ದರು .

Post a Comment

0 Comments