ಬದಿಯಡ್ಕ :ಭಾರತದ ಸಂವಿಧಾನ ಶಿಲ್ಪಿ , ಭಾರತ ರತ್ನ ಡಾ. ಬಿ.ಆರ್ . ಅಂಬೇಡ್ಕರ್ ರ 69ನೇ ಸಂಸ್ಮರಣಾ ದಿನ ಕಾರ್ಯಕ್ರಮವನ್ನು ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ಇದರ ಆಶ್ರಯದಲ್ಲಿ ನೀರ್ಚಾಲಿನ ಮೇಲಿನ ಪೇಟೆಯಲ್ಲಿರುವ ದಿವಂಗತ ಕೃಷ್ಣ ದರ್ಬೆತ್ತಡ್ಕ(ನಿವೃತ್ತ ಗ್ರಾಮಾಧಿಕಾರಿ ) ಅವರ ಕಚೇರಿಯಲ್ಲಿ
ನಡೆಸಲಾಯಿತು. ವಿಚಾರ ವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ ಯವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿ , ಪತ್ರಕರ್ತ ರಾಧಾಕೃಷ್ಣ .ಕೆ. ಉಳಿಯತ್ತಡ್ಕ ಅವರು ಪುಷ್ಪಾರ್ಚನೆಗೈದರು. ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ , ಜಾನಪದ ಕಲಾವಿದ ಶಂಕರ ಸ್ವಾಮಿಕೃಪಾ , ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಮಾಜಿ ಅಧ್ಯಕ್ಷ ಹರೀಶ್ಚಂದ್ರ ಪುತ್ತಿಗೆ , ವಿಚಾರ ವೇದಿಕೆಯ ಕಾರ್ಯದರ್ಶಿ ಸುಂದರ ಬಾರಡ್ಕ ಉಪಸ್ಥಿತರಿದ್ದರು.

0 Comments