ಉಪ್ಪಳ : ಬಿರುವೆರ್ ಕುಡ್ಲ ಇದರ ಪೈವಳಿಕೆ ಘಟಕದ 4 ನೇ ವರ್ಷದ ವಾರ್ಷಿಕೋತ್ಸವವು ಮುಳಿಗದ್ದೆಯಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಗಣೇಶ್ ಕುಮಾರ್ ಸ್ಥಾನದ ಮನೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಜಾತಿ ಭೇದ ಮರೆತು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂಕಲ್ಪದಂತೆ ಸಂಘಟನೆಯ ಮೂಲಕ ಸಮಾಜಕ್ಕೆ ನಮ್ಮದಾದ ಸೇವೆಯನ್ನು ಕೊಟ್ಟರೆ ಭಗವಂತನ ಅನುಗ್ರಹ ಸದಾ ನಮಗೆ ಇರುವುದೆಂದು ಅನುಗ್ರಹಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಉಪನ್ಯಾಸವಿತ್ತರು. ಸಭೆಯಲ್ಲಿ ಮಾಣಿಲ ಗ್ಗಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಮ್ಮೇರಿ ಚಿಪ್ಪಾರು ಇದರ ಅಧ್ಯಕ್ಷ ಅಶೋಕ್ ಪೂಜಾರಿ ಎಂ.ಸಿ ಲಾಲ್ ಭಾಗ್, ಪೈವಳಿಕೆ ಗಾಮ ಪಂಚಾಯತ್ ಸದಸ್ಯೆ ಯಶೋದ ಚಕ್ಕರೆಗುಳಿ, ಮಾಜಿ ಪಂಚಾಯತ್ ಸದಸ್ಯೆ ಮಮತ ಸುಧೆಂಬಳ, ದೊಡ್ಡ ಮನೆ ತರವಾಡು ಬಾಬು ಪೂಜಾರಿ, ಗುಡ್ಡೆಮನೆ ತರವಾಡು ಶ್ರೀಕೃಷ್ಣ ಪೂಜಾರಿ, ಮೀಪುಗುರಿ ತರವಾಡು ಧೂಮಪ್ಪ ಪೂಜಾರಿ , ಶ್ರೀನಿವಾಸ ಪೂಜಾರಿ ಸೊಂಕಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು 2024 - 2025 ಸಾಲಿನ SSLC ಯಲ್ಲಿ ಅತ್ಯಧಿಕ ಅಂಕ ಪಡೆದ ಕುಮಾರಿ ಶ್ರೀಯಾ ಕೆ.ಎಂ ಇವರನ್ನು ಗೌರವಿಸಲಾಯಿತು. ಸೇವಾ ಯೋಜನೆ ಎಂದು ಪ್ರತಿ ವರ್ಷದಂತೆ ಈ ವರ್ಷವೂ ಇಬ್ಬರು ಮಕ್ಕಳಿಗೆ ಗೌರವ ಧನ ಸಹಾಯ ಮಾಡಲಾಯಿತು. ವಸಂತ ಮಾಸ್ಟರ್ ಅಮೇರಿ ಸ್ವಾಗತಿಸಿ, ಕಸ್ತೂರಿ ಕಣಿಹಿತ್ತಿಲು ವಂದಿಸಿದರು. ರವಿ ಎಸ್ಎಂ ಕುಕ್ಕಾಜೆ ಕಾರ್ಯಕ್ರಮ ನಿರೂಪಣೆ ಮಾಡಿದರು. ವಾರ್ಷಿಕದ ಅಂಗವಾಗಿ ಗಣಪತಿ ಹೋಮ, ಗುರು ಪೂಜೆ, ಸತ್ಯ ನಾರಾಯಣ ಪೂಜೆ ನಡೆಸಲಾಯಿತು.


0 Comments