ಕಾಸರಗೋಡು : ಜಿಯುಪಿ ಶಾಲೆ ಮೊಗ್ರಾಲ್ ಪುತ್ತೂರು ಶತಮಾನೋತ್ಸವ ಸಂಭ್ರಮಾಚರಣೆಯ 'ಉಜಿರ ಪ್ರಭೆ' ಎಂಬ ವಿಭಿನ್ನ ಕಾರ್ಯಕ್ರಮ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಕವನ ಸಂಕಲನ ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿನಿ ಪ್ರಣಮ್ಯ ನ 'ಚಿಗುರು' ಕವನ ಸಂಕಲನವನ್ನು ಶಾಲಾ ಶತಮಾನೋತ್ಸವ ವೇದಿಕೆಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಅಬ್ದುಲ್ಲ ಕುಂಞಿ ಬಿಡುಗಡೆ ಮಾಡಿದರು. ಬಹುಮುಖ ಪ್ರತಿಭೆಯಾದ ಈಕೆ ಅಧ್ಯಾಪಕಿ ಡಾ. ಸೌಮ್ಯಾ- ಪ್ರಸಾದ್ ದಂಪತಿಗಳ ಸುಪುತ್ರಿಯಾಗಿದ್ದಾಳೆ.

0 Comments