ಬದಿಯಡ್ಕ : ಕಾನತ್ತಿಲದಲ್ಲಿ ನಾಲ್ಕು ಬಾಳಿಕೆ, ಹನ್ನೆರಡು ಒಕ್ಕಲು ಮತ್ತು ಹತ್ತು ಜನ ಸಮಸ್ತರ ಸಹಭಾಗಿತ್ವದಲ್ಲಿ ವರ್ಷಂಪ್ರತಿ ನಡೆದು ಬರುವ ಶ್ರೀ ಧೂಮಾವತೀ ದೈವದ ಧರ್ಮನೇಮವು ಮಾ.29ನೇ ಆದಿತ್ಯವಾರ ಜರಗಲಿದೆ. ಮಾ.28ಕ್ಕೆ ಮದ್ಯಾಹ್ನ ಗಣಪತಿ ಪೂಜೆ, ಸಂಜೆ ಗಂಟೆ 3 ಕ್ಕೆ ತಂಬಿಲ, ರಾತ್ರಿ 7:30ರಿಂದ ಶ್ರೀ ದುರ್ಗಾಪರಮೇಶ್ವರಿ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ತೊಡಂಙಲು ಮತ್ತು ಅನ್ನ ಸಂತರ್ಪಣೆ, ಮಾ29ಕ್ಕೆ ಬೆಳಗ್ಗೆ 8 ರಿಂದ ಶ್ರೀ ಧೂಮಾವತಿ ದೈವದ ನೃತ್ತ, ಅರಸಿನಹುಡಿ ಪ್ರಸಾದ ವಿತರಣೆ ಜರಗಲಿದೆ.

0 Comments