ಬಾಯಾರು : ಕಣಿಹಿತ್ತಿಲು ಶ್ರೀ ಮಲರಾಯ ಧೂಮಾವತಿ ಧರ್ಮದೈವ ಕುಪ್ಪೆ ಪಂಜುರ್ಲಿ ನಾಗ ಪರಿವಾರ ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಗೊನೆ ಮುಹೂರ್ತವು ಇಂದು ನಡೆಯಿತು. ಈ ಸಂಧರ್ಭದಲ್ಲಿ ಕುಟುಂಬದ ಹಿರಿಯರು ಕೊರಗಪ್ಪ ಗುರುಸ್ವಾಮಿ, ಮಲರಾಯ ದೈವ ಪೂಜಾರಿ ಕೃಷ್ಣಪ್ಪ ಪೂಜಾರಿ, ಕಾಂತಪ್ಪ ಬಂಗೇರ, ಕೊರಗಪ್ಪ ಪೂಜಾರಿ ಸುಣ್ಣಾಡ, ಉಮೇಶ್ ಕಾಸರಗೋಡು ನಾರಾಯಣ ಕಾಯಿಕೋಟೆ, ಸುಂದರ ಕಣಿಹಿತ್ತಿಲು, ದೈವ ನರ್ತಕ ರಾಜೇಶ್ ಮಾರು ಮೊದಲಾದವರು ಉಪಸ್ಥಿತರಿದ್ದರು, ವಾರ್ಷಿಕ ಉತ್ಸವವು ಏಪ್ರಿಲ್ 4 ಶನಿವಾರ ಬೆಳಿಗ್ಗೆ ಹರಿಸೇವೆ, ಸಂಜೆ ಪರಿವಾರ ದೈವಗಳ ನೇಮೋತ್ಸವ ಏ.5 ಆದಿತ್ಯವಾರ ಧೂಮಾವತಿ ಹಾಗೂ ಮಲರಾಯ ದೈವಗಳ ನೇಮೋತ್ಸವ ನಡೆಯಲಿರುವುದು

0 Comments