ಕಾಸರಗೋಡು : ವಿಧಾನಸಭಾ ಚುನಾವಣೆಯನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿಸುವ ಹಾಗೂ ಹಸಿರು ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಲೆಕ್ಟರೇಟ್ನಲ್ಲಿ ಪ್ರಚಾರಾರ್ಥ ಸ್ಥಾಪಿಸಿರುವ ‘ಮಾದರಿ ಹಸಿರು ಚುನಾವಣಾ ಮತಗಟ್ಟೆ’ಯನ್ನು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಉದ್ಘಾಟಿಸಿದರು. ಬಳಿಕ ಈ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಹಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಚುನಾವಣೆಯಲ್ಲಿ ಹಸಿರು ಕಾನೂನು ಪಾಲಿಸುವ ಮಹತ್ವವನ್ನು ನೆನಪಿಸಿದರು.

0 Comments