Ticker

6/recent/ticker-posts

Ad Code

ಮಮತೆ ಮತ್ತು ನೈತಿಕತೆ ಭಾರತೀಯ ತಾಯಂದಿರ ಶಕ್ತಿ: ಕಾಳ್ಯಂಗಾಡಿನಲ್ಲಿ ಶ್ರೀ ಮಾತಾನಂದಮಯಿ

 

ಕಾಸರಗೋಡು : ನಮ್ಮ ಸಮಾಜವನ್ನು ಆರೋಗ್ಯಪೂರ್ಣವಾಗಿಸುವಲ್ಲಿ ತಾಯಂದಿರ ಪಾತ್ರ ಅಮೋಘವಾದುದು. ಮಮತೆ ಮತ್ತು ನೈತಿಕತೆ ಅವರ ಮೂಲಶಕ್ತಿ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಮಾತಾನಂದಮಯೀ ಅಭಿಪ್ರಾಯಪಟ್ಟರು. ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ನಿಮಿತ್ತ ನಡೆದ ಮಾತೃಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ತಮ್ಮ ಮನೆಯನ್ನೇ ದೇವಾಲಯವನ್ನಾಗಿಸುವ, ಬದುಕಿನಲ್ಲಿ ದೇವಾಲಯಗಳನ್ನು ಪ್ರಧಾನ ಕೇಂದ್ರವಾಗಿಸುವ ಕಲೆ ತಾಯಂದಿರಿಗಿದೆ. ತಾವು ಧಾರ್ಮಿಕವಾಗಿ ತೊಡಗಿಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಯನ್ನೂ ಆ ನಿಟ್ಟಿನಲ್ಲಿ ಸಜ್ಜುಗೊಳಿಸುವ ದೊಡ್ಡ ಹೊಣೆಯನ್ನು ಅವರು ಹೊಂದಿದ್ದಾರೆ ಎಂದವರು ನುಡಿದರು. 

ಹಿಂದೂ ಐಕ್ಯವೇದಿಕೆಯ ರಾಜ್ಯ ಉಪಾಧ್ಯಕ್ಷೆ ನಿಶಾ ಟೀಚರ್ ಕಣ್ಣೂರು ಧಾರ್ಮಿಕ ಭಾಷಣ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ರೂಪಕಲಾ ದಂಪತಿಗೆ ಗೌರವಾರ್ಪಣೆ ನಡೆಯಿತು. ಖ್ಯಾತ ನಾಟಿವೈದ್ಯೆ ಯಮುನಾ ಸುಬ್ಬಣ್ಣ ಶೆಟ್ಟಿ ಅವರಿಗೆ ಸನ್ಮಾನ ಜರುಗಿತು. ಬ್ರಹ್ಮಕಲಶೋತ್ಸವದ ಮಾತೃ ಸಮಿತಿ ಅಧ್ಯಕ್ಷೆ ರಾಧಿಕಾ ರಂಜಿತ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮಪಂಚಾಯತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್, ಸ್ಥಾಯೀ ಸಮಿತಿ ಅಧ್ಯಕ್ಷೆ ಪುಷ್ಪಾ ಗೋಪಾಲನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಜಯಶ್ರೀ ನಾಗರಾಜ್,  ನಾರಾಯಣ ಗುರು ವನಿತಾ ಸಹಕಾರಿ ಸೊಸೈಟಿಯ ಅಧ್ಯಕ್ಷೆ ಸರೋಜಿನಿ ಸುಬ್ಬಣ್ಣ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ್ತಿ ಮೀರಾ ಕಾಮತ್, ಮುಖ್ಯ ಶಿಕ್ಷಕಿ ಯಶೋದಾ ಟೀಚರ್, ನಗರಸಭೆ ಸದಸ್ಯೆ ಶಾರದಾ, ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು. ಮಾತೃಸಮಿತಿ ಪ್ರಧಾನ ಕಾರ್ಯದರ್ಶಿ ದೀಪಾ ರಾಜೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಹರ್ಷಿತಾ ಕಾಳ್ಯಂಗಾಡು ಪ್ರಾಸ್ತಾವಿಕ ಭಾಷಣ ಮಾಡಿದರು. ಉಪಾಧ್ಯಕ್ಷೆ ಜ್ಯೋತಿ ಸಂತೋಷ್ ವಂದಿಸಿ, ಜತೆ ಕಾರ್ಯದರ್ಶಿ ಮಮತಾ ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಂಜೇಶ್ವರ ಬಾಲಕೃಷ್ಣ ಮಾಸ್ಟರ್ ಶಿಷ್ಯ ವೃಂದದಿಂದ ನಾಟ್ಯೋತ್ಸವ ನಡೆಯಿತು.

Post a Comment

0 Comments