Ticker

6/recent/ticker-posts

ಎಣ್ಮಕಜೆ ಬಿಜೆಪಿಯಿಂದ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಮರಣೆ


ಪೆರ್ಲ : ಬಿಜೆಪಿ ಎಣ್ಮಕಜೆ ಪಂಚಾಯತ್ ಸಮಿತಿ ವತಿಯಿಂದ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಸಂಸ್ಮರಣಾ ಕಾರ್ಯಕ್ರಮ ಪಂಚಾಯತ್ ಸಮಿತಿ ಕಾರ್ಯಲಯದಲ್ಲಿ ಜರಗಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳಿಧರ್ ಯಾದವ್ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಛಾಯಚಿತ್ರಕ್ಕೆ ಪುಷ್ಪರ್ಚನೆಗೈದು  ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಕೆಪಿ ಅನಿಲ್ ಕುಮಾರ್, ಬ್ಲಾಕ್ ಪಂಚಾಯತ್ ಸದಸ್ಯ ಬಟ್ಟುಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಆಶಾಲತ, ಇಂದಿರಾ, ನೇತಾರರಾದ, ಪುಷ್ಪಾ ಆಮೆಕ್ಕಳ, ಟಿ ಪ್ರಸಾದ್, ಪದ್ಮಶೇಖರ್, ಶಿವರಾಮ್, ಮಮತಾ ಯು ರೈ, ನಾರಾಯಣ ಪ್ರಸಾದ್ ಕುಟೇಲ್ ಮುಂತಾದವರು ಉಪಸ್ಥಿತರಿದ್ದರು. ಮಂಡಲ ಕಾರ್ಯದರ್ಶಿ ಸುಮಿತ್ ರಾಜ್ ಸ್ವಾಗತಿಸಿ, ವಾರ್ಡು ಸದಸ್ಯೆ ಉಷಾ ಗಣೇಶ್ ವಂದಿಸಿದರು.

Post a Comment

0 Comments