Ticker

6/recent/ticker-posts

Ad Code

ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವ ಸಂಘ ಇದರ ಜಿಲ್ಲಾ ಸಮಾವೇಶ


 ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವ ಸಂಘ ಇದರ ಜಿಲ್ಲಾ ಸಮಾವೇಶ ವನ್ನು ಸಮುದಾಯದ ಜನರನ್ನು ಒಗ್ಗೂಡಿಸಿಕೊಂಡು ಮುಳ್ಳೇರಿಯ ಕಾಡಗಮ್ ಸಹಕಾರಿ ಬ್ಯಾಂಕ್ ಹಾಲ್ ನಲ್ಲಿ ಸೇರಲಾಯಿತು, ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಗುಣಪಾಲ ಅಮೈ ಅಧ್ಯಕ್ಷತೆ ವಹಿಸಿದರು ಹಾಗೂ ಸಭೆಗೆ ಪ್ರದಾನ ಕಾರ್ಯದರ್ಶಿ ಶ್ರೀ ಸುರೇಶ್ ಕಾಸರಗೋಡು ಸ್ವಾಗತ ನೀಡಿದರು, ವೇದಿಕೆ ಯಲ್ಲಿ ಜಿಲ್ಲಾ ಕೋಶಾಧಿಕಾರಿ ಶ್ರೀ ಕುಂಞ್ಞಪ್ಪು ಮಂಞಂಪಾರೆ, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಶೀನಾ ಮಂಞಂಪಾರೆ, ಶ್ರೀ ಮುತ್ತಪ್ಪ ದೇವರಡ್ಕ, ಶ್ರೀಮತಿ ಸೌಧಾಮಿನಿ ಕಾಞಂಗಾಡ್, ಶ್ರೀಮತಿ ಗುಲಾಬಿ ಕುಂಬಳೆ, ಶ್ರೀ ಬಾಬು ಎಡಪರಂಬು, ಶ್ರೀ ಸುಂದರ ನೆಟ್ಟ ನಿಗೆ, ಶ್ರೀ ರಾಜರಾಮ್ ಪುತ್ರಕಳ, ಶ್ರೀ ಸಂತೋಷ್ ಆದೂರ್,ಶ್ರೀ ರಾಧಕೃಷ್ಣ ಮಂಞಂಪಾರೆ,ಸಭೆಯಲ್ಲಿ ಭಾಗಿಯಾದರು 

ಸಮುದಾಯದ ಏಳಿಗೆಗಾಗಿ, ಬೆಳವಣಿಗೆಗಾಗಿ, ರಕ್ಷಣೆಗಾಗಿ, ಸಂಘಟನಾತ್ಮಕವಾಗಿ ಕಾರ್ಯಪ್ರವೃತಿಗೆ ಬರುತ್ತೇವೆ ಎಂದು ಜಿಲ್ಲಾ ಸಮಿತಿ ಸಂಕಲ್ಪ ಮಾಡಿಕೊಂಡಿತು, ಹಾಗೂ ಸಮುದಾಯದ ವಿರುದ್ಧ ಆಗುವಂತಹ ಅನ್ಯಾಯಗಳಿಗೆ ಕಾನೂನಾತ್ಮಕ ಹೋರಾಟಗಾಳಿಗೂ ಜಿಲ್ಲಾ ಸಮಿತಿ ಶತಸಿದ್ಧ ಯೆಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು ಜಿಲ್ಲಾ ಕಾರ್ಯಕಾರಿ ಸದಸ್ಯ ಶ್ರೀ ರಾಜೇಶ್ ಅಮೈ ವಂದನಾರ್ಪಣೆ ಮಾಡಿದರು

Post a Comment

0 Comments