ಮುಳ್ಳೇರಿಯ : ಪೆರಿಯಡ್ಕದ ಎಂ. ಶಿವ ಎಂಬವರ ಕಾಂಪೌಂಡ್ನಲ್ಲಿರುವ ಬಾವಿಗೆ ಬಿದ್ದು ಮೃತಪಟ್ಟಿರುವುದು ಒಂದು ವರ್ಷದ ಹೆಣ್ಣು ಚಿರತೆ ಎಂದು ದೃಢೀಕರಿಸಲಾಗಿದೆ. ಕಾಸರಗೋಡು ಅರಣ್ಯ ವಲಯ ಮುಖ್ಯಸ್ಥ ಸಿ.ವಿ. ವಿನೋದ್ ಕುಮಾರ್, ಕಾರಡ್ಕ ವಿಭಾಗ ಅರಣ್ಯ ಅಧಿಕಾರಿ ಕೆ.ಎ. ಬಾಬು, ಆರ್.ಆರ್.ಟಿ ಮತ್ತು ಆರ್.ಆರ್.ಟಿ ನೇತೃತ್ವದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹೊರತೆಗೆದು ಬೋವಿಕ್ಕಾನ ವಿಭಾಗ ಅರಣ್ಯ ಕಚೇರಿಗೆ ಕೊಂಡೊಯ್ದು ಜಿಲ್ಲಾ ಅರಣ್ಯ ಇಲಾಖೆ ಮುಖ್ಯಸ್ಥ, ವಯನಾಡ್ ಅರಣ್ಯ ಇಲಾಖೆಯ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಡಾ. ಎಲಿಯಾಸ್ ರಾವುತರ್ ಮುಳ್ಳೇರಿಯ ಮತ್ತು ಬೋವಿಕ್ಕಾನ ವಿಭಾಗದ ಪಶು ವೈದ್ಯರ ಸಮ್ಮುಖದಲ್ಲಿ ಮೃತಪಟ್ಟ ಚಿರತೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ನಂತರ ನಿನ್ನೆ ಸಂಜೆ ಕಾರಡ್ಕ ವಿಭಾಗ ಅರಣ್ಯ ಕಚೇರಿ ಆವರಣದಲ್ಲಿ ಸಂಸ್ಕರಿಸಲಾಯಿತು.

0 Comments