ಮಂಜೇಶ್ವರ :ಪಾವೂರು ಸಮೀಪದ ಮುಡಿಮಾರಿನಲ್ಲಿ ಇಂದು (ಫೆ.6)ಚಂದ್ರಹಾಸ ಪೂಜಾರಿ ಮತ್ತು ಮಕ್ಕಳ 26ನೇ ವರ್ಷದ ಸೇವೆಯಾಟವಾಗಿ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದೀತ ದಶಾವತಾರ ಯಕ್ಷಗಾನ ಮಂಡಳಿ, ಬಜಪೆ, ಸುಂಕದಕಟ್ಟೆ ಇವರಿಂದ ರಾಷ್ಟ್ರೀಯ ರತ್ನ ಪ್ರಶಸ್ತಿ ಪುರಸ್ಕೃತ ಬಿ.ಕೆ ಶ್ರೀನಿವಾಸ ಸಾಲ್ಯಾನ್ ವಿರಚಿತ "ಮಾಗಣೇದ ಮಲರಾಯೆ" ಎಂಬ ತುಳು ಪುಣ್ಯಕಥಾ ಭಾಗವನ್ನು ಬಯಲಾಟವಾಗಿ ಆಡಲಿದ್ದಾರೆ. ಇದರ ಅಂಗವಾಗಿ ದ ಮಧ್ಯಾಹ್ನ ಮುಡಿಮಾರು ಶ್ರೀ ಅನ್ನಪೂರ್ಣ ನಿಲಯದಲ್ಲಿ ಶ್ರೀದೇವಿಗೆ ಪೂಜೆ, ನಂತರ ಪ್ರಸಾದ ವಿತರಣೆ ,ಅನ್ನಸಂತರ್ಪಣೆ, ಸಂಜೆ 6:00ಗಂಟೆಗೆ ಚೌಕಿ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆದು ಯಕ್ಷಗಾನ ಸೇವೆಯು ಜರಗಲಿಕ್ಕಿದೆ.

0 Comments