ಮಂಜೇಶ್ವರ : ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೆದಪಡ್ಪು ಇದರ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಅಧ್ಯಕ್ಷರಾದ ಶ್ರೀಕುಮಾರಿ ಟೀಚರ್ ನೆರವೇರಿಸಿ ಮಾತನಾಡಿ, "ಸಶಕ್ತ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದ್ದು, ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಆದ್ದರಿಂದ ಸೂಕ್ತ ಸಂಧರ್ಭದಲ್ಲಿ ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು" ಎಂದು ತಿಳಿಸಿದರು. ಗ್ರಂಥಾಲಯದ ಸದಸ್ಯೆ ಸರಸ್ವತಿ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಚಂದ್ರಿಕಾ ಟೀಚರ್, ಆಶಾ ವರ್ಕರ್ ಗಳಾದ ಮಮತಾ ಮುಗುಳಿ, ಜಮೀಲ ಗುವೆದಪಡ್ಪು, ಚೈತ್ರ ಟೀಚರ್ ಬಗಂಬಿಲ, ಚಿತ್ರಾಕ್ಷಿ ಕತ್ತೇರಿಕೋಡಿ, ಜಬ್ಬಾರ್ ಮಾಸ್ತರ್, ಗ್ರಂಥಾಲಯದ ಉಪಾಧ್ಯಕ್ಷರಾದ ಚಂದ್ರಹಾಸ ಕತ್ತೆರಿಕೋಡಿ, ಗ್ರಂಥಾಲಯದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರಾದ ಶ್ರೀಕುಮಾರಿ ಟೀಚರ್ (ಸ್ಕೌಟ್ & ಗೈಡ್ ನಲ್ಲಿ ಮೆಡಲ್ ಆಫ್ ಮೆರಿಟ್ ಪ್ರಶಸ್ತಿ),ಕೀರ್ತನಾ ಕತ್ತೇರಿಕೋಡಿ (ಗೈಡ್ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ) , ಜಮ್ಶೀರ (ಕಲಾ ಕ್ಷೇತ್ರ), ಅಂಕಿತಾ ಕೊಡ್ಲಮೊಗರು (ತಮಿಳು ಕಂಠ ಪಾಠ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ), ಪ್ರೀತಮ್ ಕೊಣಿಬೈಲ್ (ಸಾಂಸ್ಕೃತಿಕ ಕ್ಷೇತ್ರ), ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಹಾಗೂ ಮಹಿಳಾ ದಿನಾಚರಣೆಯ ಅಂಗವಾಗಿ ಮಾಡಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಪೋಟೋ ಪ್ರದರ್ಶನ ಏರ್ಪಡಿಸಲಾಗಿತ್ತು. ಮಹಿಳಾ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮದ ಪೂರ್ಣ ನೇತೃತ್ವವನ್ನು ಮಹಿಳೆಯರೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಲಾವಣ್ಯ ಗುವೆದಪಡ್ಪು ಸ್ವಾಗತಿಸಿ, ಗ್ರಂಥಪಾಲಕಿ ಜಯಶ್ರೀ ಕೊಡ್ಲಮೊಗರು ವಂದಿಸಿದರು. ರುಕ್ಷಾನ ಗುವೆದಪಡ್ಪು ಕಾರ್ಯಕ್ರಮ ನಿರೂಪಿಸಿದರು.

0 Comments