ಬದಿಯಡ್ಕ : ತಂದೆಯ ಜಮೀನನ್ನು ಅತಿಕ್ರಮಿಸಿ ರಸ್ತೆ ನಿರ್ಮಿಸುವುದನ್ನು ಪ್ರಶ್ನಿಸಿದ್ದಕ್ಕೆ ಯುವಕನನ್ನು ಹಲ್ಲೆಗೈದ ಘಟನೆ ವರದಿಯಾಗಿದ್ದು, ಬದಿಯಡ್ಕ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬದಿಯಡ್ಕದ ಮಾವಿನಕಟ್ಟೆಯ ಫೈಸಲ್, ರಮೀಜ್, ಫಜೀರ್ ಮತ್ತು ಫಹಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾವಿನಕಟ್ಟೆಯ ತೊಟ್ಟುಂಕರ ನಿವಾಸಿ ಅಬ್ದುಲ್ಲ ಕುಂಞಿ(45) ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ತನ್ನ ತಂದೆಯ ಒಡೆತನದ ಜಮೀನನ್ನು ಅತಿಕ್ರಮಿಸಿ ಅಕ್ರಮವಾಗಿ ರಸ್ತೆ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿದಾಗ, ನಾಲ್ಕು ಜನರ ತಂಡವೊಂದು ತನ್ನನ್ನು ತಡೆದು ಮರದ ಕೋಲುಗಳಿಂದ ಹೊಡೆದಿದೆ ಎಂದು ಅಬ್ದುಲ್ಲ ಕುಂಞಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

0 Comments