ಕಾಸರಗೋಡು : ಚೆರ್ಕಳ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುವ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದ ಹೊಸನೂರು ಮೂಲದ ರತ್ನ (30) ನಾಪತ್ತೆಯಾದ ಮಹಿಳೆ.
ಮೇ 2ರಂದು ಚೆರ್ಕಳದಲ್ಲಿರುವ ತನ್ನ ಕ್ವಾರ್ಟರ್ಸ್ ನಿಂದ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪತಿ ದೇವಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರು ಅನ್ಯರಾಜ್ಯ ಕೂಲಿ ಕಾರ್ಮಿಕೆಯಾಗಿದ್ದಾರೆ.

0 Comments