ಕಾಸರಗೋಡು: ಜಿಯೊ ಬ್ಯಾಗುಗಳನ್ನು ಇರಿಸಿ ನಿರ್ಮಿಸಿದ ಸಂರಕ್ಷಣ ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕಡಲ್ಕೊರೆತದ ಆತಂಕ ನೀಗಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಒತ್ತಾಯಿಸಿದ್ದಾರೆ. ಅವರು ತೀವ್ರ ಕಡಲ್ಕೊರೆತ ಉಂಟಾಗಿರುವ ಉದುಮ ಮಂಡಲದ ಕೀಯೂರು, ತೃಕ್ಕನ್ನಾಡ್ ಪ್ರದೇಶಗಳಿಗೆ ಬೇಟಿ ನೀಡಿ ಈ ರೀತಿ ಹೇಳಿದರು. ಕಡಲ ತೀರದ ಹಲವು ಮನೆಗಳು , ದಸ್ತೆ, ಇತರ ಸಂಸ್ಥೆಗಳು ಕಡಲ್ಕೊರೆತದ ಭೀತಿಯಲ್ಲಿದೆ. ಈ ಪ್ರದೇಶದ ಮನೆಗಳಲ್ಲಿ ವಾಸುಸುವವರು ಆತಂಕದ ಜೀವನ ನಡೆಸುತ್ತಿದ್ದು ಅವರನ್ನು ಬೇರೆಡಗೆ ಸ್ಥಳಾಂತರಿಸಬೇಕು ಎಂದವರು ಒತ್ತಾಯಿಸಿದರು.
0 Comments