ಮೀಯಪದವು : ಶ್ರೀ ಗುರುನರಸಿಂಹ ಯಕ್ಷ ಬಳಗ ಮೀಯಪದವು ತಂಡದ ವಾರ್ಷಿಕೋತ್ಸವ " ಯಕ್ಷ ಚಿಗುರು -2025 ಸಮಾರಂಭವು ಸೆಪ್ಟೆಂಬರ್ 13ನೇ ಶನಿವಾರ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿದೆ. ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಾಹಾವಿಷ್ಣು ದೇವಸ್ಥಾನ ದೇಲಂತೊಟ್ಟು ಬಜೆ, ಹೇರೂರು ಕ್ಷೇತ್ರದಲ್ಲಿ ಗಣ್ಯರ ಸಮಕ್ಷಮ ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭ ಯಕ್ಷಬಳಗ ಮೀಯಪದವು ತಂಡದ ಅಧ್ಯಕ್ಷ ವೇದಮೂರ್ತಿ ಗಣೇಶ ನಾವಡ ಮೀಯಪದವು ಹಾಗೂ ತಂಡದ ಸರ್ವಸದಸ್ಯರು ಹಿತೈಶಿಗಳು ಭಾಗವಹಿಸಿದ್ದರು.
0 Comments