ಹೊಂಡದಲ್ಲಿ ಬಿದ್ದ ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಎರಡನೇ ತರಗತಿ ವಿದ್ಯಾರ್ಥಿನಿ ಬಸ್ಸು ಹರಿದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಪಾಲಕ್ಕಾಡ್ ಪಳನಿಪಾಳಯಂ ನಿವಾಸಿ ದಂಪತಿಯ ಪುತ್ರಿ ನಸ್ರಿಯತ್ ಮಿಸ್ರಿಯ (7) ಮೃತಪಟ್ಟ ಬಾಲಕಿ. ಇಂದು (ಸೋಮವಾರ) ಬೆಳಗ್ಗೆ 9 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ
ಬಾಲಕಿ ಆಕೆಯ ತಂದೆಯ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸ್ಕೂಟರು ರಸ್ತೆಯ ಹೊಂಡಕ್ಕೆ ಬಿದ್ದು ಮಗುಚಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟ ಬಾಲಕಿಯ ಮೇಲೆ ಹರಿದಿದೆ. ಬಾಲಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಳು.
0 Comments