ಮುಂಬೈ : ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠದ 77ನೇ ಯತಿವರ್ಯ ರು ಗಳಾದ ಶ್ರೀ ಶ್ರೀಮತ್ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ಗಳವರ 31ನೇ ಚಾತುರ್ಮಾಸ ವೃತಾಚರಣೆಯು ಶ್ರೀ ಮಠದ ಮುಂಬೈಯ ವಾಲ್ಕೇಶ್ವರ ಶಾಖಾಮಠದಲ್ಲಿ ಜರಗುತ್ತಿದೆ ಈ ಶುಭ ಸಂದರ್ಭದಲ್ಲಿ ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಸೇವಾಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿ ಹಾಗೂ ಆರ್ ಯಸ್ ಬಿ ಯುವ ಸಂಘ (ರಿ) ಮೊಗೇರು ವತಿಯಿಂದ ಶ್ರೀ ಸ್ವಾಮೀಜಿಗಳವರಿಗೆ ಭೀಕ್ಷಾ ಸೇವೆ, ಪಾದ ಪೂಜೆ, ಹಾಗೂ ಫಲ ಪುಷ್ಪಗಳನ್ನು ಸಮರ್ಪಿಸಿ ಕೃತಾರ್ಥರಾದರು. ಶ್ರೀಗಳವರು ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವದಿಸಿದರು ಆಡಳಿತ ಮೊಕ್ತೇಸರ ಆಲ್ಚಾರ್ ರಾಮಚಂದ್ರ ನಾಯಕ್, ಬ್ರಹ್ಮರಗುಂಡ ದಿವಾಕರ ರಾವ್, ನೆರೋಳು ಸದಾಶಿವ ನಾಯಕ್, ಪಳ್ಳಕಾನ ಗೋಪಾಲಕೃಷ್ಣ ನಾಯಕ್, ವೇ.ಮೂ! ಶಶಿಕಾಂತ್ ಭಟ್, ವೇ. ಮೂ! ಗಣೇಶ್ ಭಟ್, ಮೋಹಿನಿ, ವಾರಿಜ, ಉಮೇಶ್ ನಾಯಕ್, ಗಣೇಶ್ ಕಾಮತ್, ನವೀನ ಕುಮಾರ್, ಶ್ರೀಮತಿ ನಿರ್ಮಲ ಮೊದಲಾದವರಿದ್ದರು

0 Comments