ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಘಟಕದ 2025–26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ಪೂರ್ಣಗೊಂಡಿದೆ. ಚುನಾವಣಾಧಿಕಾರಿ ರವಿ ನಾಯ್ಕಪು ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳೂ ಯಾವುದೇ ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ಈ ಬಾರಿ ಸಂಘದ ಅಧ್ಯಕ್ಷರಾಗಿ ಎ. ಆರ್. ಸುಬ್ಬಯ್ಯ ಕಟ್ಟೆ, ಉಪಾಧ್ಯಕ್ಷರಾಗಿ ಅಖಿಲೇಶ್ ನಗುಮುಗಂ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಕಾಂತ್ ನೆಟ್ಟಣಿಗೆ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾಲಕ್ಷ್ಮೀ, ಸ್ಟೀಪನ್ ಪ್ರದೀಪ್ ಕ್ರಾಸ್ತಾ ಹಾಗೂ ಕೋಶಾಧಿಕಾರಿಯಾಗಿ ಅಜಿತ್ ಸ್ವರ್ಗ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗಂಗಾಧರ ಕೆ., ಜಗನ್ನಾಥ ಶೆಟ್ಟಿ ಪಿಕೆ., ಗಣೇಶ ಪಿ., ರತನ್ ಕುಮಾರ್ ಹೊಸಂಗಡಿ, ರಾಜಶೇಖರ್ ಕೆ., ಆರಿಫ್ ಮೊಹಮ್ಮದ್, ದೇವದಾಸ್ ಪಾರಕಟ್ಟೆ, ಥಾಮಸ್ ಡಿಸೋಜಾ ಎಂ.ಎಸ್. ಮತ್ತು ಭಾಗ್ಯಶ್ರೀ ಅವರು ಆಯ್ಕೆಯಾದರು. ಅದೇ ರೀತಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಧಾಕೃಷ್ಣ ಉಳಿಯತಡ್ಕ ಅವರು ಆಯ್ಕೆಗೊಂಡಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

0 Comments