ಪೆರ್ಲ : ಎಣ್ಮಕಜೆ ಗ್ರಾ.ಪಂ.ನ ಎಣ್ಮಕಜೆ ಉನ್ನತಿಯ ಮನೆಯೊಂದಕ್ಕೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಕಲ್ಲೆಸೆದಿದ್ದು ಈ ಬಗ್ಗೆ ತಿಳಿದು ಎಣ್ಮಕಜೆ ಪಂ.ಅಧ್ಯಕ್ಷೆ ಕುಸುಮಾವತಿ ಬಿ ಹಾಗೂ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಉನ್ನತಿಯ ಮನೆಯವರನ್ನು ಮುಖತಃ ಭೇಟಿಯಾಗಿ ಸಂರಕ್ಷಣೆಯ ಭರವಸೆ ನೀಡಿದರು. ಈ ಬಗ್ಗೆ ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

0 Comments