ಮಂಜೇಶ್ವರ : ಪೊಯ್ಯೆ ಜುಮಾದಿ ಬಂಟ ಪರಿವಾರ ದೈವಸ್ಥಾನದ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ದೈವಸ್ಥಾನ ಗೌರವ ಅಧ್ಯಕ್ಷ ವಿಶ್ವನಾಥ್ ಉಚ್ಚಿಲ್, ಅಧ್ಯಕ್ಷ ವಿಜಯ ಕುಮಾರ ಉಳ್ಳಾಲ್, ಮಾಡ ಕ್ಷೇತ್ರದ ರಾಜ ಬೆಳ್ಚಾಡ, ನಾರಾಯಣ ಗುರಿಕಾರ, ಮಾಧವ ಮಾಡ, ಉಳ್ಳಾಲ ಶ್ರೀ ಭಗವತಿ ಕ್ಷೆತ್ರದ ನಿಖಿಲ್ ಗುರಿಕಾರ, ವಸಂತ ಉಚ್ಚಿಲ್, ಗಣೇಶ್ ಪಾವೂರು, ಹರೀಶ್ ಬೆಂಗಳೂರು, ಗಂಗಾಧರ ಮಂಗಳೂರು, ಪದ್ಮನಾಭ ಪೊಯ್ಯೆ, ಸೀತಾರಾಮ ಮಜಿಬೈಲ್, ಯಶವಂತ ಉಚ್ಚಿಲ್, ರಾಘವ ಕಣ್ಣೀರ್ ತೋಟ ಹಾಗೂ ತರವಾಡಿನ ಸದಸ್ಯರು ಭಾಗವಹಿಸಿದ್ದರು.

0 Comments