Ticker

6/recent/ticker-posts

Ad Code

ಚಟ್ಟಂಚಾಲ್ ರಸ್ತೆ ಅಪಘಾತ; ಗಾಯಾಳು ವಿದ್ಯಾರ್ಥಿ ಮೃತ್ಯು

 

ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಪೆರಿಯ ಸರಕಾರಿ  ಪಾಲಿಟೆಕ್ನಿಕ್‌ನ ಮೂರನೇ ವರ್ಷದ ವಿದ್ಯಾರ್ಥಿ ರಕ್ಷಿತ್ (19) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈತ  ಉದಯಗಿರಿಯ ವಿದ್ಯಾನಗರದ ದಿನೇಶನ್ ಮತ್ತು ರತ್ನ ದಂಪತಿಯ ಏಕ ಪುತ್ರನಾಗಿದ್ದಾರೆ. 

ಬೈಕ್ ಚಲಾಯಿಸುತ್ತಿದ್ದ ರಕ್ಷಿತ್ ನ  ಸ್ನೇಹಿತ ಸೈಯದ್ ಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ.  ಗುರುವಾರ ಸಂಜೆ ಸೈಯದ್ ಮತ್ತು ರಕ್ಷಿತ್ ಪೊಯಿನಾಚಿಯಿಂದ ಚೆರ್ಕಳಕ್ಕೆ ಹೋಗುತ್ತಿದ್ದು,  ಚಟ್ಟಂಚಾಲ್ ತಲುಪಿದಾಗ, ಹಿಂದಿನಿಂದ  ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಡಿಕ್ಕಿಯ ಪರಿಣಾಮ  ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ  ರಕ್ಷಿತ್ ಅವರನ್ನು ಮೊದಲು ಕಾಸರಗೋಡಿನ ಆಸ್ಪತ್ರೆಗೆ ಕರೆದೊಯ್ದು, ಆನಂತರ ಮಂಗಳೂರಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಿಸದೇ ಅವರು ನಿಧನರಾದರು.

Post a Comment

0 Comments