Ticker

6/recent/ticker-posts

Ad Code

ಎಣ್ಮಕಜೆ ಪಂಚಾಯತ್ ಆಡಳಿತ ದುರುಪಯೋಗಪಡಿಸಿ ಸರ್ಕಾರಿ ಸ್ವತ್ತುಗಳ ಕಳ್ಳ ಸಾಗಾಟ : ಸಿಪಿಐಎಂ, ಡಿವೈಎಫ್ಐ ನಿಂದ ಪಂ.ಕಚೇರಿ ಮುತ್ತಿಗೆ

 

ಪೆರ್ಲ : ಎಣ್ಮಕಜೆ   ಪಂಚಾಯತ್ ಕಚೇರಿ ಮತ್ತು ಸಂಬಂಧಿತ ಸಂಸ್ಥೆಗಳ ಬೆಲೆ ಬಾಳುವ ಪೀಠೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು  ಹರಾಜು ಪ್ರಕ್ರಿಯೆಯಿಲ್ಲದೆ ಮಾರಾಟಗೈದಿರುವುದನ್ನು ಖಂಡಿಸಿ ಸಿಪಿಐಎಂ ಮತ್ತು ಡಿವೈಎಫ್ ಐ ಎಣ್ಮಕಜೆ ಲೋಕಲ್ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಿಪಿಐಎಂ ಎರಿಯಾ ಸಮಿತಿ ಸದಸ್ಯ ನಾಸಿರ್ ಮಲಂಗರೆ ಉದ್ಘಾಟಿಸಿದರು. ಡಿವೈಎಫ್ ಐ ಬ್ಲೋಕ್ ಸಮಿತಿ ಅಧ್ಯಕ್ಷ ಮನೋಜ್ ಮಣಿಯಂಪಾರೆ ಅಧ್ಯಕ್ಷತೆವಹಿಸಿದ್ದರು. ಸಿಪಿಎಂಲೋಕಲ್ ಸಮಿತಿ ಸದಸ್ಯ ರಾಮಕೃಷ್ಣ ರೈ, ಡಿವೈಎಫ್ ಐ ಬ್ಲೋಕ್  ಕಾರ್ಯದರ್ಶಿ ವಿಶ್ವರಾಜ್, ನಾರಾಯಣ ಕಾಟುಕುಕ್ಕೆ ಮೊದಲಾದವರಿದ್ದರು.  ಆಡಳಿತ ಕೈಗೊಂಬೆಯಾದ ಪಂಚಾಯತ್ ಕಾರ್ಯದರ್ಶಿ, ಏಕಾಧಿಪತ್ಯದ ಉಪಾಧ್ಯಕ್ಷ ನಿಲುವು ರಾಜಿ ನೀಡಬೇಕೆಂದು ಆಗ್ರಹಿಸಿ ಎಡರಂಗ ಒಕ್ಕೂಟ ನಡೆಸಿದ ಮುನ್ಸೂಚನಾ  ಪ್ರತಿಭಟನೆ ಇದಾಗಿದೆ ಎಂದು ಪಕ್ಷ ತಿಳಿಸಿದೆ.

Post a Comment

0 Comments