ಬಾಯಾರು : ಶ್ರೀ ಮಲರಾಯ ಧೂಮಾವತಿ ಧರ್ಮದೈವ ಕುಪ್ಪೆ ಪಂಜುರ್ಲಿ ನಾಗ ಪರಿವಾರ ದೈವಸ್ಥಾನ ಕಣಿಹಿತ್ತಿಲು ಚಿಪ್ಪಾರು ಬಾಯಾರು ಇಲ್ಲಿನ ನಾಗ ದೇವರ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕವು ವಿಷ್ಣು ಅಸ್ರ ಉಳಿಯತ್ತಾಯ ಇವರ ನೇತೃತ್ವದಲ್ಲಿ ನಡೆಯಿತು.
ಆಶ್ಲೇಷ ಬಲಿ ಪೂಜೆ, ನಾಗ ದೇವರ ಹಾಗೂ ರಕ್ತೇಶ್ವರಿ ದೈವದ ಪುನರ್ ಪ್ರತಿಷ್ಠೆ ಕಲಶಾಬಿಷೇಕವು ನಡೆಯಿತು. ವಾರ್ಷಿಕ ಉತ್ಸವದ ಅಂಗವಾಗಿ ಏಪ್ರಿಲ್ 4ಕ್ಕೆ ಶನಿವಾರ ಬೆಳಿಗ್ಗೆ ಹರಿಸೇವೆ ಸಂಜೆ ಪರಿವಾರ ದೈವಗಳ ನೇಮೋತ್ಸವ, ಏಪ್ರಿಲ್ 5 ಆದಿತ್ಯವಾರ ಧೂಮಾವತಿ ಹಾಗೂ ಮಲರಾಯ ದೈವಗಳ ನೇಮೋತ್ಸವ ನಡೆಯಲಿರುವುದು.


0 Comments