Ticker

6/recent/ticker-posts

ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರ ಪರಿಸರದಲ್ಲಿ ವನ ಜೀವನ ಯಜ್ಞ-2025 ಸಂಪನ್ನ



 ಪೈವಳಿಕೆ: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು ಇದರ 

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗವು  ಕಾಸರಗೋಡಿನ ಪೊಸಡಿಗುಂಪೆ ಶ್ರೀ ಶಂಕರ ಧ್ಯಾನ ಮಂದಿರದ ಸಹಯೋಗದೊಂದಿಗೆ ವನ ಜೀವನ ಯಜ್ಞ-2025 ಕಾರ್ಯಕ್ರಮವನ್ನು ಪೊಸಡಿಗುಂಪೆಯ  ಶ್ರೀ ಶಂಕರ ಧ್ಯಾನ ಮಂದಿರದ ಪರಿಸರದಲ್ಲಿ ಆಯೋಜಿಸಿತ್ತು.  ಕಾರ್ಯಕ್ರಮದಲ್ಲಿ ಧ್ಯಾನ ಮಂದಿರದ ಅಧ್ಯಕ್ಷರಾದ ಶ್ರೀ ಕಕ್ವೆ ಶಂಕರ್ ರಾವ್ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.  ಈ ಕಾರ್ಯಕ್ರಮದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇರಳ ಅರಣ್ಯ ಇಲಾಖೆಯಿಂದ  ಒದಗಿಸಲಾದ ವಿವಿಧ ತಳಿಯ 100 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಇಂಗು ಗುಂಡಿ ಅಭಿವೃದ್ಧಿಪಡಿಸುವುದರ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಾಧ್ಯಾಪಕರಾದ  ಪ್ರೊ. ಗಣರಾಜ್ ಕರುವಜೆ ಅವರು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಶ್ರೀ ಸತ್ಯಪ್ರಕಾಶ್ ಎಡಕ್ಕಾನ, ಶ್ರೀ ಕೇಶವ ಪ್ರಸಾದ್ ಎಡಕ್ಕಾನ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಇತರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಸಹಕರಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅಂತಿಮವಾಗಿ, ಸಮೀಪದ ಶಿರಿಯಾ ಅಣೆಕಟ್ಟಿಗೆ ಭೇಟಿ ನೀಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Post a Comment

0 Comments