Ticker

6/recent/ticker-posts

Ad Code

ನೀಲೇಶ್ವರದಲ್ಲಿ ರಾಜೀವ್ ಭವನಕ್ಕೆ ಹಾನಿ : ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಕೇಸು

ನೀಲೇಶ್ವರ: ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ  ಕೊಝುವಲ್‌ನಲ್ಲಿರುವ ರಾಜೀವ್ ಭವನಕ್ಕೆ ನುಗ್ಗಿದ 11 ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯುವ ಕಾಂಗ್ರೆಸ್ ನಾಯಕ ಶಿವಪ್ರಸಾದ್ ಅರುವಾತ್ ನೀಡಿದ ದೂರಿನ ಆಧಾರದ ಮೇಲೆ ರತೀಶ್, ಸಾನು ಮೋಹನ್, ಸಬಿನ್ ಮೂಲಪಳ್ಳಿ, ಶ್ಯಾಮಿನಿ ಸಬಿನ್, ಅಜೇಶ್, ಆಕಾಶ್ , ಪ್ರಣವ್ ಓರ್ಚಾ, ಸಂಜಯ್ ಪೊಟೊತುರುತಿ, ಸೆರ್ಗೆ ಲುಜೋವ್ ಮತ್ತು ಕಂಡರೆ ಗುರುತು ಪತ್ತೆ ಹಚ್ಚಬಹುದಾದ  ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿವೈಎಫ್‌ಐ ಕಾರ್ಯಕರ್ತರು ಸಂಘರ್ಷಕ್ಕಿಳಿದಿದ್ದು ವಾರ್ಡ್ ಕಾಂಗ್ರೆಸ್ ಸಮಿತಿ ಕಚೇರಿಯಾದ ರಾಜೀವ್ ಭವನದ ಕಿಟಕಿಗಳನ್ನು ಒಡೆದು ಧ್ವಜಸ್ತಂಭವನ್ನು ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ 10,000 ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

Post a Comment

0 Comments