Ticker

6/recent/ticker-posts

Ad Code

ಕೆಲಸದ ನಡುವೆ ಕಟ್ಟಡದ ಸನ್‌ಶೇಡ್ ಮೇಲಿನಿಂದ ಬಿದ್ದ ಕಾರ್ಮಿಕ ಮೃತ್ಯು

ಉಪ್ಪಳ: ಸಾರಣೆ  ಕೆಲಸದ ನಡುವೆ ಕಟ್ಟಡದ ಸನ್‌ಶೇಡ್ ಮೇಲಿನಿಂದ ಬಿದ್ದು ಯುವಕನೊಬ್ಬ ದಾರುಣವಾಗಿ  ಮೃತಪಟ್ಟ ಬಗ್ಗೆ ವರದಿಯಾಗಿದೆ. ಅಟ್ಟೆಗೋಳಿ ನವೋದಯ ನಗರದ  ಕೇಶವ - ರಮಾವತಿ ದಂಪತಿಗಳ  ಪುತ್ರ ಶಂಕರ (26) ಮೃತ ಯುವಕ. ಬುಧವಾರ ಮಧ್ಯಾಹ್ನ ಮಣಿಮುಂಡದ ಉಪ್ಪಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೇಶವ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಸಂಜೆಯ ವೇಳೆಗೆ ಸಾವನ್ನಪ್ಪಿದರು.

ಮೃತರು ಸಹೋದರರಾದ ಸಂತೋಷ್, ವೇಣುಗೋಪಾಲ್, ಸಹೋದರಿ ರೇಷ್ಮಾ ಎಂಬಿವರನ್ನಗಲಿದ್ದಾರೆ. ಮಂಜೇಶ್ವರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments