ಮಂಗಳೂರು : ಉದ್ಯೋಗ ನಿಮಿತ್ತ ಇಸ್ರೇಲ್ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಹೊಯ್ದೆ ಎಂಬಲ್ಲಿ ಸೋಮವಾರ ನಡೆದಿದೆ. ಉಳ್ಳಾಲ ಹೊಯ್ದೆ ನಿವಾಸಿ, ಸೂರ್ಯಪ್ರಕಾಶ್ ಡಿ'ಸೋಜಾ (42) ಮೃತಪಟ್ಟವರು.
ಕಳೆದ ಒಂದು ವರ್ಷದಿಂದ ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದ ಇವರು ಇತ್ತೀಚಿಗೆ ಸಹೋದರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಊರಿಗೆ ಬಂದಿದ್ದರು. ಮೇ 17ರಂದು ಅವರು ಮತ್ತೆ ಇಸ್ರೇಲ್ಗೆ ಮರಳಬೇಕಿತ್ತು. ಈ ನಡುವೆ ಆತ್ಮಹತ್ಯೆಗೈದಿದ್ದು ನಿಖರ ಕಾರಣ ತಿಳಿದು ಬಂದಿಲ್ಲ

0 Comments