Ticker

6/recent/ticker-posts

ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕಾರಡ್ಕ ಬ್ಲೋಕ್‌ ಮಟ್ಟದ ಕೃಷಿಕರ ಸಭೆ


ಮುಳ್ಳೇರಿಯ:   ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಕಾರಡ್ಕ ಬ್ಲೋಕ್ ಕೃಷಿಕರ ಸಭೆಯು ಮುಳ್ಳೇರಿಯ ಗಣೇಶ್ ಕಲಾ ಮಂದಿರದಲ್ಲಿ ನಡೆಯಿತು. 
 ಬೆಳ್ಳೂರು ಬ್ಯಾಂಕ್ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಕಡಂಬಳ್ಳಿತ್ತಾಯರು ದೀಪಪ್ರಜ್ವಲನೆ ನಡೆಸಿ ಉದ್ಘಾಟಿಸಿದರು. ಕಾರಡ್ಕಬ್ಲೋಕ್ ನಲ್ಲಿ ಒಳಪಟ್ಟಿರುವ ಪಂಚಾಯತುಗಳಾದ ಕುತ್ತೀಕೋಲು, ಬೇಡಡ್ಕ, ಮುಳಿಯಾರ್, ಕಾರಡ್ಕ, ಕುಂಬಡಾಜೆ, ಬೆಳ್ಳೂರು, ದೇಲಂಪಾಡಿ ಹೀಗೆ ಏಳು ಪಂಚಾಯತುಗಳಲ್ಲಿನ ಸದಸ್ಯರುಗಳನ್ನು ಆಯ್ಕೆ ಮಾಡಿ ಸಮಿತಿಯನ್ನು ರಚಿಸಲಾಯಿತು. ಬ್ಲೋಕ್ ಸಮಿತಿಯ ಅಧ್ಯಕ್ಷರಾಗಿ ಶ್ರೀ ಜಗಜೀವನ್ ದಾಸ್ ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀ ಮೋಹನನ್ ಅದೂರು, ಜನಾರ್ದನನ್ ಕುತ್ತೀಕೋಲು. ಕಾರ್ಯದರ್ಶಿಗಳಾಗಿ ಪ್ರಶಾಂತ್ ಕಾರಡ್ಕ, ರಾಜನ್ ಕುತ್ತೀಕೋಲು. ಕೋಶಾಧಿಕಾರಿಯಾಗಿ ಶ್ರೀಕೃಷ್ಣಭಟ್ ಬಂದಡ್ಕ. ಮತ್ತು ಎಲ್ಲಾ ಪಂಚಾಯತುಗಳಿಂದ ಸದಸ್ಯರುಗಳನ್ನು ಸೇರಿಸಿ ಸಮಿತಿ ರಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಪುರುಷೋತ್ತಮ, ಬೊಡ್ಡನಕೊಚ್ಚಿ ವಹಿಸಿದ್ದರು. ಬಾರತೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಮುರಳಿಧರನ್, ಮುಖ್ಯಭಾಷಣ ಮಾಡಿದರು. ರಾಜ್ಯ ಉಪಾಧ್ಯಕ್ಷರು, ಶ್ರೀ ರಾಮ. ಯನ್. ಮಾತಾಡಿದರು. ಸಭೆಯಲ್ಲಿ ಜಿಲ್ಲಾಉಪಾಧ್ಯಕ್ಷ ಡಾ.ಶಿವರಾಯ.ಭಟ್ ಜಿಲ್ಲಾ ಕಾರ್ಯದರ್ಶಿ ಶ್ರೀ ಸಚಿನ್ ಕುಮಾರ್. ಯಂ. ಕೃಷಿ ಹಾಗೂ ಕೃಷಿಕರ ಯೋಜನೆಗಳ ಬಗ್ಗೆ ನಿರ್ದೇಶನಗಳನ್ನು ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಚಿರುಗುಳಿ ಸ್ವಾಗತಿಸಿದರು. ವಿಶೇಷವಾಗಿ ಕಂಗು ಕೃಷಿಗೆ ಬಾಧಿಸಿರುವ ಎಲೆಚುಕ್ಕಿ ರೋಗ, ಹಳದಿರೋಗ, ವಿಪರೀತ ಮಳೆಕಾರಣ ಕಂಗುತೋಟಗಳಲ್ಲಿ ಮಹಾಳಿ ರೋಗದಿಂದ ಈ ಪ್ರದೇಶದ ಕೃಷಿಕರು ಕಂಗಲಾಗಿದ್ದಾರೆ. ಇದರ ಬಗ್ಗೆ ಸರಕಾರ, ಹಾಗೂ ಕೃಷಿ ಇಲಾಖೆಯು ಶೀಘ್ರವೇ ಗಮನಹರಿಸಿ ಕೃಷಿಕರಿಗೆ ನಷ್ಟದಪರಿಹಾರ ನೀಡಬೇಕಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.: ಭಾರತೀಯ ಕಿಸಾನ್ ಸಂಘದ ವತಿಯಿಂದ ಕಾಸರಗೋಡು ಜಿಲ್ಲೆಗೆ ಅತಿವೃಷ್ಟಿಯಿಂದ ಬೆಳೆ ಪರಿಹಾರಕ್ಕೆ ಒತ್ತಾಯ.

Post a Comment

0 Comments