Ticker

6/recent/ticker-posts

ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ


 ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ನಡೆಯಿತು. ಜೈನ್ ಪ್ರೌಢಶಾಲೆ ಮೂಡಬಿದ್ರೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಮುನಿರಾಜ ರೆಂಜಲ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹೆತ್ತವರಿಗೆ ರಕ್ಷಕ ಮತ್ತು ಶಿಕ್ಷಕರ ನಡುವೆ ಇರುವ ಬಾಂಧವ್ಯ ಹೇಗಿರಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. 

ಶ್ರೀ ಮಾರ್ಟಿನ್ ಡಿಸೋಜರವರು ಗತ ಸಭೆಯ ವರದಿಯನ್ನು ವಾಚಿಸಿದರು. 

ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪಿಟಿಎ ಅಧ್ಯಕ್ಷರಾಗಿ ಶ್ರೀ ಜಯಪ್ರಕಾಶ್ ಡಿಸೋಜ ಎಂ. ಪಿ. ಟಿ. ಎ ಅಧ್ಯಕ್ಷೆ ಯಾಗಿ ಶ್ರೀಮತಿ ಸುಜಾತ  ಆಯ್ಕೆಯಾದರು. ಕಳೆದ ವರ್ಷ ಸೇವೆ ಸಲ್ಲಿಸಿದ ಪಿಟಿಎ ಅಧ್ಯಕ್ಷ ಶ್ರೀ ಶ್ರೀ ಸೀತಾರಾಮ ಬೇರಿಂಜಾ, ಎಂ ಪಿ ಟಿ ಎ ಅಧ್ಯಕ್ಷೆ ಶ್ರೀ ಸೀತಾ ಲಕ್ಷ್ಮಿ, ಎಸ್ ಎಸ್ ಜಿ  ಕನ್ವೀನರ್ ಶ್ರೀ ಜಯಪ್ರಕಾಶ್ ಡಿಸೋಜ ಅವರಿಗೆ ಪ್ರಶಸ್ತಿ ಫಲಕ ಮತ್ತು ಶಾಲು ಹೊದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಂ/ಫಾ ಬೇಸಿಲ್ ವಾಸ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಶ್ರೀಪತಿ ಸರ್,  ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ ರಾಜೇಶ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುನಿತಾ ಕ್ರಾಸ್ತಾ ಸ್ವಾಗತಿಸಿ, ಶ್ರೀಮತಿ ನಿಶಾ ವೀಣಾ ವಂದಿಸಿದರು. ಶ್ರೀಮತಿ ಜೆಸಿಂತಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments