Ticker

6/recent/ticker-posts

Ad Code

ಎಣ್ಮಕಜೆ ಪಂಚಾಯತ್ ಸದಸ್ಯತ್ವ ಮುಗಿಯುವ ಮೊದಲೇ ಕಾಂಗ್ರೆಸ್ ಗೆ ಸೇರಿದ ಬಿಜೆಪಿ ನೇತಾರ


 ಪೆರ್ಲ: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಸಮೀಪಿಸಿದಂತೆ ಎಣ್ಮಕಜೆ ಪಂಚಾಯಿತಿಯಲ್ಲಿ ನಡೆದ ಮಹತ್ತರ ಬೆಳವಣಿಗೆಯಲ್ಲಿ ಬಿಜೆಪಿ ವಾರ್ಡ್ ಸದಸ್ಯ 

ಮಹೇಶ್ ಭಟ್  ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಸೇರ್ಪಡೆಯಿಂದ ಕಾಂಗ್ರೆಸ್ ಬಲ ಹೆಚ್ಚಿದ್ದು ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ತಿಳಿದು ಬಂದಿದೆ.

ಕೇರಳ ರಾಜ್ಯದ ಮಾಜಿ ಗೃಹ ಸಚಿವ, ಮಾಜಿ ಪ್ರತಿ ಪಕ್ಷ ನಾಯಕ, ಪ್ರಸ್ತುತ ವಿಧಾನ ಸಭೆ ಶಾಸಕ ರಮೇಶ್ ಚೆನ್ನಿತಲ ಸಮ್ಮುಖದಲ್ಲಿ ಶೇಣಿಯಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ  ಸಾಯ 1ನೇ ವಾರ್ಡ್ ಸದಸ್ಯ ಮಹೇಶ್ ಭಟ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. 

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅವರ ಸಹೋದರ, ಕಾಂಗ್ರೆಸ್ ಪಕ್ಷದ ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಫೆಬ್ರವರಿ 3ರಂದು ಹಾಕಿದ ಫೇಸ್ ಬುಕ್ ಪೋಸ್ಟ್ ವಿವಾದಕ್ಕೆ ಆರಂಭ ಕಾರಣವಾಗಿತ್ತು. "ಆಪರೇಶನ್ ಹಸ್ತ" ಹೆಸರಲ್ಲಿ ಅವರು ಮಹೇಶ್ ಭಟ್ ಜೊತೆಗಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ನಾಲು ವರ್ಷಗಳ ನಮ್ಮ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ, ನಾವು ಎಂಟು ಸದಸ್ಯರಲ್ಲ ಒಂಭತ್ತು ಎಂದು ಅವರು ಬರೆದಿದ್ದರು.

ರಾಧಾಕೃಷ್ಣ ಅವರ ಈ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡುವಂತೆ ಮಹೇಶ್ ಭಟ್ ಗೆ ಬಿಜೆಪಿ ನೊಟೀಸ್ ಕಳುಹಿಸಿತ್ತು. ಆದರೆ ಅವರ ವೈಯುಕ್ತಿಕ ಫೇಸ್‌ಬುಕ್ ಪೋಸ್ಟ್ ಗೆ ಸ್ಪಷ್ಟನೆ ನೀಡಲು ನಾನು ಜವಾಬ್ದಾರನಲ್ಲ. ಯುಡಿಎಫ್ ನೇತೃತ್ವದ ಪಂಚಾಯಿತಿ ಆಡಳಿತ ಸಮಿತಿಯ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿದ್ದೇನೆ. ಪಂಚಾಯಿತಿ ಆಡಳಿತದ ವಿರುದ್ಧ ಕೆಲವು ಮುಖಂಡರು ವಿನಾ ಕಾರಣ ನಡೆಸುವ ಹೋರಾಟ, ಪ್ರತಿಭಟನೆಯನ್ನು ಬೆಂಬಲಿಸಲಾರೆ. ಬಿಜೆಪಿ ಒಳಗಿನ ಗುಂಪುಗಾರಿಕೆ, ತಾರತಮ್ಯವನ್ನು ವಿಮರ್ಶಿಸಿದ ಕಾರಣ ಕೆಲವು ಸ್ಥಳೀಯ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದೇನೆ ಎಂದು ಮಹೇಶ್ ಭಟ್   ತಿಳಿಸಿದ್ದರು.

ಇದೇ ವೇಳೆ, ಮಹೇಶ್ ಭಟ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಆರು ವರ್ಷಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆ  ಹೊರಡಿಸಿತ್ತು. ಪಕ್ಷದ ಯಾವುದೇ ಚಟುವಟಿಕೆ, ಕಾರ್ಯಕ್ರಮಗಳಲ್ಲಿ ಭಾಗವಹಿಸದೆ, ಪಂಚಾಯಿತಿ ಸಭೆ ಹಾಗೂ ಇತರ ಕಾರ‍್ಯಕ್ರಮಗಳಲ್ಲಿ ಪಕ್ಷಕ್ಕೆ ಮುಜುಗರ ಉಂಟುಮಾಡುವ ಪ್ರವೃತ್ತಿಯನ್ನು ಮುಂದುವರಿಸಿದ ಕಾರಣ ಪಕ್ಷದ ರಾಜ್ಯ ಸಮಿತಿ ಅಧ್ಯಕ್ಷರ ಅನುಮತಿಯೊಂದಿಗೆ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ. 

ಈ ಹಿಂದೆ ಕಾಂಗ್ರೆಸ್ ನ ಕೈಯೊಳಗಿದ್ದ 1ನೇ ವಾರ್ಡಿನ್ನು 2020ರ ಪಂ.ಚುನಾವಣೆಯಲ್ಲಿ ಮಹೇಶ್ ಭಟ್ಟರನ್ನು  ಬಿಜೆಪಿ ಪಕ್ಷದ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಲಾಗಿತ್ತು. ಕರ್ನಾಟಕ ಬಿಜೆಪಿಯ ನಾಯಕರುಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಮಹೇಶ್ ಭಟ್ಟರು ಹೊಸ ಟ್ರೆಂಡ್ ಸೃಷ್ಟಿಸಿ ಊಹಿಸಲು ಅಸಾಧ್ಯವಾದ ರೀತಿಯಲ್ಲಿ ಅ ವಾರ್ಡಿನಲ್ಲಿ ಗೆದ್ದು ಬಂದಿದ್ದರು. 

ಬಳಿಕ ಬಿಜೆಪಿ ಪಕ್ಷದೊಳಗೆ ನಡೆದ ಅಂತರಿಕ ಸಮಸ್ಯೆಯಿಂದ ಬೇಸತ್ತ ಭಟ್ಟರು ಕಾಂಗ್ರೆಸ್ ನತ್ತ ಒಲವು ಬೆಳೆಸಿದ್ದು ತಮ್ಮ ಜತೆಗಿದ್ದ ಮಹೇಶ್ ಭಟ್ ರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಮೂಲಕ ಎಣ್ಮಕಜೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷದ ಅತೃಪ್ತರನ್ನು ಸೇರ್ಪಡೆಗೊಳಿಸುವ  ಆಪರೇಶನ್ ಹಸ್ತ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕರು ವಿಶೇಷ ಚಾನೆಲ್ ಗೆ ಪ್ರತಿಕ್ರಿಯಿಸಿದ್ದಾರೆ.

Post a Comment

0 Comments