ಮಂಜೇಶ್ವರ : ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಬಸ್ ಕಂಡಕ್ಟರ್ ಓರ್ವರು ನಿಧನರಾದರು. ವರ್ಕಾಡಿ ಧರ್ಮನಗರದ ಬಾಬು ಪೂಜಾರಿ ಅವರ ಪುತ್ರ ಸುಕುಮಾರ (51) ಶುಕ್ರವಾರ ರಾತ್ರಿ ನಿಧನರಾದರು. ತಲಪ್ಪಾಡಿ-ಆನೆಕಲ್ಲು, ಉಪ್ಪಳ-ಕನ್ಯಾನ ಮಾರ್ಗದಲ್ಲಿ ಓಡಾಡುತ್ತಿದ್ದ ದುರ್ಗಾ ಪ್ರಸಾದ್ ಬಸ್ಸಿನಲ್ಲಿ ಸುದೀರ್ಘ ಕಾಲ ನಿರ್ವಾಹಕರಾಗಿ ದುಡಿಯುತ್ತಿದ್ದ ಇವರು ಇತ್ತೀಚೆಗೆ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಯಶೋದ, ಏಕೈಕ ಪುತ್ರಿ ಸಾನ್ವಿ. ಸಹೋದರಿಯರಾದ ಸುಜಾತ, ಅನಿತಾ ಎಂಬಿವರನ್ನಗಲಿದ್ದಾರೆ.

0 Comments