Ticker

6/recent/ticker-posts

Ad Code

ಕಿದೂರು ಆರ್ತಲ ಶ್ರೀಕೋಮಾರು ಚಾಮುಂಡಿ ಬೊಬ್ಬರ್ಯ ದೈವಸ್ಥಾನದ ಪುನರ್ ಪ್ರತಿಷ್ಠ ಬ್ರಹ್ಮಕಲಶ ಮತ್ತು ತರವಾಡು ಮನೆ ಗೃಹ ಪ್ರವೇಶ,ದೈವಗಳ ಕೋಲೋತ್ಸವ

 


ಕುಂಬಳೆ : ಕಿದೂರು ಸಮೀಪದ ಆರ್ತಲ ಶ್ರೀಕೋಮಾರು ಚಾಮುಂಡಿ ಬೊಬ್ಬರ್ಯ ದೈವಸ್ಥಾನದ ಪುನರ್ ಪ್ರತಿಷ್ಠ  ಬ್ರಹ್ಮಕಲಶ ಮತ್ತು ನೂತನವಾಗಿ ನಿರ್ಮಿಸಿದ ತರವಾಡು  ಮನೆಯ ಗೃಹ ಪ್ರವೇಶವು  ಏಪ್ರಿಲ್ 28ರಿಂದ 30ರ ತನಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಇದರ  ಆಮಂತ್ರಣ ಪತ್ರಿಕೆ ಬಿಡುಗಡೆಯು ಕುಟುಂಬದ ಯಜಮಾನ ಕೃಷ್ಣ ಶೆಟ್ಟಿಯವರ ಉಪಸ್ಥಿತಿಯಲ್ಲಿ ಶಂಕರನಾರಾಯಣ ಮಯ್ಯ ಸಿರಿಬಾಗಿಲು
ಬಿಡುಗಡೆಗೊಳಿಸಿದರು..  ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ ಮತ್ತು ಕುಟುಂಬಸ್ತರು ಊರ ಹತ್ತು ಸಮಸ್ತರು ಪಾಲ್ಗೊಂಡಿದ್ದರು.ಬ್ರಹ್ಮಕಲಶೋತ್ಸವದಂಗವಾಗಿ ಏಪ್ರಿಲ್ 22  ಬುಧವಾರ ಬೆಳಗ್ಗೆ ಗೊನೆ ಮುಹೂರ್ತ,ಏಪ್ರಿಲ್ 28 ಮಂಗಳವಾರ ಸಂಜೆ ಗಂಟೆ 6:00ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹ ವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷಘ್ನಹೋಮ, ವಾಸ್ತು ಹೋಮ, ವಾಸ್ತುಬಲಿ, ಅನ್ನಸಂತರ್ಪಣೆ ಜರಗುವುದು.

ಎಪ್ರಿಲ್ 29 ಬುಧವಾರ ಬೆಳಗ್ಗೆ ಗಂಟೆ 6ರಿಂದ ಗಣಪತಿ ಹವನ, ಬ್ರಹ್ಮಕಲಶ ಪೂಜೆ,ಬೆಳಗ್ಗೆ ಗಂಟೆ 9:50ರಿಂದ 11:25ರ ಮಧ್ಯೆ ನಡೆಯುವ ಮಿಥುನಲಗ್ನ ಶುಭಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ಹಾಗೂಶ್ರೀ ಕೋಮಾರು ಚಾಮುಂಡಿ, ಬೊಬ್ಬರ್ಯ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ,ತಂಬಿಲ, ಮಹಾಪೂಜೆ, ನಿತ್ಯ ನೈಮಿತ್ಯಗಳ ನಿರ್ಣಯ ಜರಗಲಿದೆ.ಬೆಳಗ್ಗೆ ಗಂಟೆ 11ರಿಂದಹರಿಸೇವೆ, ಪ್ರಸಾದ ವಿತರಣೆ,ಮಧ್ಯಾಹ್ನ ಗಂಟೆ 1:00ರಿಂದಅನ್ನಸಂತರ್ಪಣೆ,ಸಂಜೆ ಗಂಟೆ 5ರಿಂದಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ,ರಾತ್ರಿ ಗಂಟೆ 7ರಿಂದ ಗುಳಿಗ ದೈವದ ನೇಮೋತ್ಸವ,ರಾತ್ರಿ ಗಂಟೆ 8:30ಕ್ಕೆ ಭಂಡಾರ ಏರುವುದು,ರಾತ್ರಿ 9ರಿಂದ ಅನ್ನಸಂತರ್ಪಣೆ ಜರಗಲಿದೆ

 ಏಪ್ರಿಲ್ 30ರಂದು ಬೆಳಗ್ಗೆ ಗಂಟೆ 8ಕ್ಕೆ ಎಣ್ಣೆ ಬೂಳ್ಯ,ಬೆಳಗ್ಗೆ ಗಂಟೆ 10:30ಕ್ಕೆ ಶ್ರೀ ಬೊಬ್ಬರ್ಯ ದೈವದ ನೇಮೋತ್ಸವ,ಬೆಳಗ್ಗೆ ಗಂಟೆ 11:30ಕ್ಕೆ ಧರ್ಮದೈವ ಶ್ರೀ ಕೋಮಾರು ಚಾಮುಂಡಿ ದೈವದ ನೇಮೋತ್ಸವ,ಮಧ್ಯಾಹ್ನ ಗಂಟೆ 1ರಿಂದ  ಅನ್ನಸಂತರ್ಪಣೆ,ಮಧ್ಯಾಹ್ನ ಗಂಟೆ 2ರಿಂದ ಕೊರತ್ತಿ ದೈವದ ನೇಮೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Post a Comment

0 Comments