ಕೊಚ್ಚಿ : ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ ಇಂದು ರಾಜ್ಯದ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಬೇಕರಿಗಳನ್ನು ಮುಚ್ಚಿ ಮುಷ್ಕರ ನಡೆಸಲಾಗುತ್ತಿದೆ. ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ನಿನ್ನೆ ರಾತ್ರಿಯಿಂದ 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ. ಆನ್ಲೈನ್ ಆಹಾರ ವಿತರಣೆಯೂ ಮೊಟಕುಗೊಳಿಸಲಾಗಿದೆ.
ವ್ಯಾಪಾರಿ ವ್ಯವಸಾಯಿ ಸಮಿತಿ, ವ್ಯಾಪಾರೋದ್ಯಮ ಸಮಿತಿ, ಆಲ್ ಕೇರಳ ಕ್ಯಾಟರರ್ಸ್ ಅಸೋಸಿಯೇಷನ್ ಮತ್ತು ಹಾಸ್ಟೆಲ್ ಮಾಲೀಕರ ಒಕ್ಕೂಟದಂತಹ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡುತ್ತಿದೆ. ಪೇಟೆ ಪಟ್ಟಣಗಳಲ್ಲಿ ಜನ ಇಂದು ಹೋಟೇಲ್ ಮುಷ್ಕರದಿಂದಾಗಿ ಆಹಾರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
.jpeg)
0 Comments