Ticker

6/recent/ticker-posts

ಸಂಟನಡ್ಕ ಶ್ರೀ ಜಟಾಧಾರಿ ಧೂಮಾವತಿ ದೈವಸ್ಥಾನ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

 


ಪೆರ್ಲ: ಸಂಟನಡ್ಕ ಶ್ರೀ ಜಟಾಧಾರಿ ಧೂಮಾವತಿ ನಾಗ ಪರಿವಾರ ದೈವಸ್ಥಾನ ಸಂಟನಡ್ಕ ಮಣಿಯಂಪಾರೆ ಇದರ ವಾರ್ಷಿಕ ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ನಾಯ್ಕ ಕೆದ್ರೋಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಟಾಧಾರಿ ದೈವದ ಪೂಜಾರಿ ಶ್ರೀ ಆನಂದ ಪೂಜಾರಿ ಕಿದೂರು, ಶ್ರೀ ನಾರಾಯಣ ಪೂಜಾರಿ ಸಂಟನಡ್ಕ, ಲೋಕೇಶ್ ದಳ ಕಲ್ಲಡ್ಕ, ಮತ್ತಿತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಉಮೇಶ್ ಬಳ್ಪ ವಾರ್ಷಿಕ ಲೆಕ್ಕಪತ್ರ ಹಾಗೂ ವರದಿ ಮಂಡನೆ ಮಾಡಿದರು. ಸಭೆಯಲ್ಲಿ ಕಳೆದ ತಿಂಗಳಲ್ಲಿ ನಡೆದ ಬ್ರಹ್ಮ ಕುಂಭಬಿಷೇಕ ಮತ್ತು  ದೈವಗಳ ನೇಮೋತ್ಸವದ ಯಶಸ್ವಿಗಾಗಿ ಮಾಡಿದ ಉತ್ಸವ ಸಮಿತಿಯ ಬರಖಾಸ್ತು ಮಾಡಲಾಯಿತು. ಉತ್ಸವದ ಸಂಧರ್ಭದಲ್ಲಿ ಸಹಕಾರ ನೀಡಿದ ಎಲ್ಲಾ ಸಂಘ ಸಂಸ್ಥೆಗಳಿಗೂ, ಊರ ಪರವೂರ ಭಕ್ತ ಬಾಂಧವರಿಗೂ ಉತ್ಸವ ಸಮಿತಿಯ ಪರವಾಗಿ ಹಾಗೂ ಸೇವಾ ಸಮಿತಿಯ ಪರವಾಗಿ ಉತ್ಸವ ಸಮಿತಿಯ ಕಾರ್ಯದರ್ಶಿ ದಿನೇಶ್ ಚೇರುಗೊಳಿ ಅಭಿನಂದನೆ ಸಲ್ಲಿಸಿದರು. ಸಮಿತಿಯ ಕೋಶಾಧಿಕಾರಿ ಸೊಂಪ ಪೂಜಾರಿ ಶೆಟ್ಟಿಬೈಲು ಕ್ಷೇತ್ರದ ಮುಂದಿನ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.

ನೂತನ ಪದಾಧಿಕಾರಿಗಳಾಗಿ ಗೌರವ ಅಧ್ಯಕ್ಷರು ಶ್ರೀ ಚನಿಯಪ್ಪ ಪೂಜಾರಿ ಕುತ್ತಿಗಾರು,ಅಧ್ಯಕ್ಷರು ಶ್ರೀ ಪುರುಷೋತ್ತಮ ಅಲ್ಚಾರು,ಉಪಾಧ್ಯಕ್ಷರು ಶ್ರೀ ಮಾಧವ ಪೂಜಾರಿ ವೇಣೂರು,ಕಾರ್ಯದರ್ಶಿ ಶ್ರೀ ಉಮೇಶ್ ಪೂಜಾರಿ ಬಳ್ಪ,ಜತೆ ಕಾರ್ಯದರ್ಶಿ ದಿನೇಶ್ ಚೆರುಗೊಳಿ ಮತ್ತು ಶ್ರೀ ಹರೀಶ್ ಸಂಟನಡ್ಕ,ಕೋಶಾಧಿಕಾರಿ ಸೊಂಪ ಪೂಜಾರಿ ಶೆಟ್ಟಿಬೈಲು ಹಾಗೂ ಹತ್ತು ಮಂದಿ ಸದಸ್ಯರನ್ನು ಕಾರ್ಯಕಾರಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.ಉಮೇಶ್ ಬಳ್ಪ ಸ್ವಾಗತಿಸಿ ದಿನೇಶ್ ಚೆರುಗೊಳಿ ವಂದಿಸಿದರು.

Post a Comment

0 Comments