Ticker

6/recent/ticker-posts

ಕೊಟ್ಟಯಂನಲ್ಲಿ ಕಟ್ಟಡ ಬಿದ್ದು ಮಹಿಳೆ ಮೃತಪಟ್ಟ ಘಟನೆ; ಆರೋಗ್ಯ ಸಚಿವೆ ವೀಣಾ ಜಾರ್ಜ್ ರಾಜೀನಾಮೆ ಒತ್ತಾಯಿಸಿ ಬಿಜೆಪಿ ಆಶ್ರಯದಲ್ಲಿ ಜನರಲ್ ಆಸ್ಪತ್ರೆಗೆ ಮಾರ್ಚ್


 ಕಾಸರಗೋಡು: ಕೊಟ್ಟಯಂನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಕಟ್ಟಡ ಮುರಿದು ಬಿದ್ದು ಮಹಿಳೆ ಮೃತಪಟ್ಟ ಘಟನೆಯ ನೈತಿಕ ಹೊಣೆ  ಹೊತ್ತು ಆರೋಗ್ಯ ಸಚಿವೆ  ವೀಣಾ ಜಾರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಜನರಲ್ ಆಸ್ಪತ್ರೆಗೆ ಮಾರ್ಚ್ ನಡೆಯಿತು. 

ಪ್ರತಿಭಟನಾ ಮೆರವಣಿಗೆಯನ್ನು ಎಲ್.ಐ.ಸಿ ಕಚೇರಿ ಬಳಿ ಪೊಲೀಸರು ತಡೆದರು. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ತೀವ್ರಗೊಂಡಾಗ ಪೊಲೀಸರು ಜಲಪಿರಂಗಿ ಬಳಸಿದರು.
ಪಕ್ಷದ ಮಾಜಿ ಪ್ರಾಂತ ಕಾರ್ಯದರ್ಶಿ ವಿ.ಕೆ.ಸಜೀವನ್ ಉದ್ಘಾಟಿಸಿದರು.  


ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ಮುಖಂಡರುಗಳಾದ ಪಿ.ಆರ್.ಸುನಿಲ್, ಎನ್.ಬಾಬುರಾಜ್,  ಮನುಲಾಲ್ ಮೇಲತ್, ಸವಿತಾ ಟೀಚರ್, ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಮಂಡಲ, ಪಂಚಾಯತು ಮಟ್ಟದ ನಾಯಕರು, ಕಾರ್ಯಕರ್ತರು, ಹಿತೈಷಿಗಳು ಭಾಗವಹಿಸಿದರು

Post a Comment

0 Comments