Ticker

6/recent/ticker-posts

Ad Code

ರಾಜ್ಯದಲ್ಲಿ ಇಂದು ಅತಿ ತೀವ್ರ ಮಳೆ; ಕಾಸರಗೋಡು ಸಹಿತ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್


 ತಿರುವನಂತಪುರಂ: ರಾಜ್ಯದಲ್ಲಿ ಇಂದು ಅತಿ ತೀವ್ರ ಮಳೆ ಉಂಟಾಗಲಿದೆಯೆಂದು ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಸಹಿತ 3 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ 7 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಕೋಜಿಕ್ಕೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿದ್ದು ಅತಿ ತೀವ್ರ ಮಳೆ ನಿರೀಕ್ಷಿಸಲಾಗಿದೆ.  ವಯನಾಡ್, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ,ಇಡುಕ್ಕಿ, ಆಲಪ್ಪುಯ ಎಂಬೀ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಜತೆ ಸಿಡಿಲು, 40 ಕಿ.ಮೀ ವೇಗದ ಬಿರುಗಾಳಿ ಎಂಬಿವೂ ಉಂಟಾಗಲಿದೆ. ಬಂಗಾಳಕೊಲ್ಲಿಯಲ್ಲಿ ಮೋನ್ ತಾ ಬಿರುಗಾಳಿ ಕಾಣಿಸಿಕೊಂಡಿದ್ದು ಇದು ಆಂದ್ರಪ್ರದೇಶದ ತೀರದತ್ತ ಸಾಗುತ್ತಿದೆಯೆಂದು ಹವಾಮಾನ ಇಲಾಖೆ ವರದಿ‌ಮಾಡಿದೆ.

Post a Comment

0 Comments