ತಿರುವನಂತಪುರಂ: ಇಂದು ಉತ್ತರ ಕೇರಳದಲ್ಲಿ ಮಳೆ ವ್ಯಾಪಕವಾಗಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಹ ಸಣ್ಣ ಪ್ರಮಾಣದ ಮಳೆ ಬರಲಿದೆ.
ನಾಳೆ (ಆದಿತ್ಯವಾರ) ಕಾಸರಗೋಡು, ಕಣ್ಣೂರು ಕೋಜಿಕ್ಕೋಡು, ಮಲಪ್ಪುರಂ, ವಯನಾಡ್, ತ್ರಿಶೂರ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಮುದ್ರಗಳಲ್ಲಿ ಉಂಟಾಗುತ್ತಿರುವ ವಾಯು ಭಾರ ಕುಸಿತವು ವ್ಯಾಪಕ ಮಳೆಗೆ ಕಾರಣವಾಗಲಿದೆ.

0 Comments