ಬದಿಯಡ್ಕ : ಕೊಲ್ಲಂನಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಗೆದ್ದು ಚಾಂಪಿಯನ್ ಶಿಫ್ ಗಳಿಸಿದ ಕಾಸರಗೋಡು ಜಿಲ್ಲಾ ತಂಡವನ್ನು ಪ್ರತಿನಿಧಿಸಿದ ಅಗಲ್ಪಾಡಿಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಮೊಹಮ್ಮದ್ ಅಮರುದ್ದೀನ್ ಕೆ.ಕೆ.ಯನ್ನು ಅಭಿನಂದಿಸಲಾಯಿತು. 9ನೇ ತರಗತಿಯ ವಿದ್ಯಾರ್ಥಿಯಾದ ಈತ ಕ್ರೀಡಾ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆಗೈದಿರುವುದಕ್ಕೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಅವನ ಹೆತ್ತವರಾದ ಅಬ್ದುಲ್ಲಾ ನಾರಂಪಾಡಿ ಉಪಸ್ಥಿತರಿದ್ದರು.
0 Comments