Ticker

6/recent/ticker-posts

Ad Code

ಕುಂಬಳೆ ಬಳಿಯ ಪೇರಾಲಿನಲ್ಲಿ ಅನಧಿಕೃತ ಮಣ್ಣು ಸಾಗಾಟ; ಜೆಸಿಬಿ ವಶ, ಟಿಪ್ಪರು ಸಹಿತ ಚಾಲಕರುಗಳು ಪರಾರಿ


 ಕುಂಬಳೆ: ಪೂರ್ವ ಅನುಮತಿ ಪಡೆಯದೆಯೇ ಖಾಸಗಿ ವ್ಯಕ್ತಿಯ ಹಿತ್ತಲಿನಿಂದ ಮಣ್ಣು ಸಾಗಾಟ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಪೊಲೀಸರನ್ನು‌ ಕಂಡಾಗ ಮಣ ಸಾಗಿಸುವ ಟಿಪ್ಪರುಗಳು ಪರಾರಿಯಾಗಿದ್ದು ಜೆಸಿಬಿಯನ್ನು ವಶಪಡಿಸಲಾಗಿದೆ. ಕುಂಬಳೆ ಪೇರಾಲ್ ಪೊಟ್ಡೋರಿ ಎಂಬಲ್ಲಿ ಈ ಘಟನೆ ನಡೆದಿದೆ.

    ಅನಧಿಕೃತವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಟಿಪ್ಪರುಗಳ ಸಹಿತ ಚಷಲಕರುಗಳು ನಾಪತ್ತೆಯಾಗಿದ್ದರು. ಆದರೆ ಜೆಸಿಬಿಯನ್ನು ವಶಪಡಿಸಲಾಯಿತು. ಜೆಸಿಬಿಯ ದಾಖಲೆಗಳು ಲಭಿಸಿಲ್ಲವೆಂದೂ ಯಾವುದೋ ಸ್ಕೂಟರಿನ ನಂಬ್ರವನ್ನು ಬಳಸಿ ಮಣ್ಣು ಕೆಲಸ ಮಾಡಲಾಗುತ್ತಿದೆಯೆಂದೂ ಪೊಲೀಸರು ತಿಳಿಸಿದ್ದಾರೆ

Post a Comment

0 Comments