ಮಾನ್ಯ : ಶ್ರೀ ಮಹಾವಿಷ್ಣು ಮಹಿಳಾ ವೃಂದ ಕಾರ್ಮಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ನಡೆದ ಮಹಿಳಾ ವೃಂದದ ಸಭೆಯಲ್ಲಿ ಲೆಕ್ಕಪತ್ರ ಮಂಡನೆ ಯೊಂದಿಗೆ ಮುಂದಿನ ಅವಧಿಗೆ ನೂತನ ಸಮಿತಿಯ ಆಯ್ಕೆ ನಡೆಯಿತು.
ನೂತನ ಸಮಿತಿ ಅಧ್ಯಕ್ಷರಾಗಿ ಸರಸ್ವತಿ ಶಿವನಾಯ್ಕ್ ಕಾರ್ಮಾರು,ಉಪಾಧ್ಯಕ್ಷರುಗಳಾಗಿ ನಳಿನಿ ಕಾರ್ಮಾರು, ಅಜಿತ ಕಾರ್ಮಾರು,ಕಾರ್ಯದರ್ಶಿಯಾಗಿ ಪೂರ್ಣಿಮಾ ಮೋಹನ್ ಕಾರ್ಮಾರು, ಜೊತೆ ಕಾರ್ಯದರ್ಶಿಗಳಾಗಿ ನಮಿತ ಕಾರ್ಮಾರು, ಜಯ ಕಾರ್ಮಾರು,ಕೋಶಾಧಿಕಾರಿಯಾಗಿ ಲಲಿತ ಶಂಕರ್ ಕಾರ್ಮಾರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

0 Comments