ಪೆರ್ಲ: ಕ್ಯಾಂಪ್ಕೊ ಸಂಸ್ಥೆ ಮಂಗಳೂರು ಇದರ ವತಿಯಿಂದ "ಸಾಂತ್ವನ" ಯೋಜನೆಯಡಿಯಲ್ಲಿ ಅಡ್ಯನಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀಯುತ ಶ್ಯಾಮ ಭಟ್ ಪೆಲತ್ತಡ್ಕ ಇವರ ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಸಹಾಯಧನ ರೂ 50;000/- ವನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಶಂಕರ ನಾರಾಯಣ ಭಟ್ ಖಂಡಿಗೆ ಇವರು ದಿನಾಂಕ 05/06/2024 ರಂದು ಸದಸ್ಯರ ಮನೆಯಲ್ಲಿ ಹಸ್ತಾಂತರಿಸಿದರು.
ಪುತ್ತೂರು ಪ್ರಾಂತೀಯ ಸೀನಿಯರ್ ಮ್ಯಾನೇಜರ್ ಶ್ರೀ ಪ್ರಕಾಶ ಶೆಟ್ಟಿ ಹಾಗೂ ಅಡ್ಯನಡ್ಕ ಶಾಖಾ ವ್ಯವಸ್ಥಾಪಕರಾದ ತಾರನಾಥ ಬಂಗೇರ ಇವರು ಉಪಸ್ಥಿತರಿದ್ದರು.
0 Comments