ಕಾಸರಗೋಡು: ಸ್ಕೂಟರುಗಳಲ್ಲಿ ನಿಷೇಧಿತ ಮದ್ಯ ಸಾಗಿಸುತ್ತಿದ್ದ 3 ಮಂದಿಯನ್ನು ಬಂದಡ್ಕ ಎಕ್ಸ್ಪ್ರೆಸ್ ರೇಂಜ್ ಇನ್ಸ್ಪೆಕ್ಟರ್ ಶಹಬಾಸ್ ಅಹಮ್ಮದರ ನೇತೃತ್ವದಲ್ಲಿ ಬಂಧಿಸಲಾಗಿದೆ. 3 ಸ್ಕೂಟರು, 23.5 ಲೀಟರ್ ವಿದೇಶ ಮದ್ಯ ಎಂಬಿವುಗಳನ್ನು ವಶಪಡಿಸಲಾಗಿದೆ. ಪನಯಾಲ್ ವೆಳುತ್ತೋಳಿ ನಿವಾಸಿ ಅಭಿಲಾಷ್ ಕರಣ್, ರಾವಣೇಶ್ವರ ನಿವಾಸಿ ರಾಜೇಶನ್, ನಾಟ್ಟಾಂಗಲ್ ನಿವಾಸಿ ರಾಜನ್ ಕೆ ಎಂಬಿವರು ಬಂಧಿತ ಆರೋಪಿಗಳು.
ಅನಧಿಕೃತವಾಗಿ ಮದ್ಯ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ.
ಅಧಿಕಾರಿಗಳಾದ ಎಂ.ಕೆ.ಸುಜಿತ್, ಅಜೇಶ್ ಮೋಹನ್, ಸ್ವರೂಪ್, ಗಣೇಶ್, ರಮೇಶ್ ಬಾಬು ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments