Ticker

6/recent/ticker-posts

Ad Code

ಕಾರ್ಮಾರು ಶ್ರೀ ಮಹಾವಿಷ್ಣು ಸೇವಾ ಸಮಿತಿಯ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ


 ಕಾರ್ಮಾರು ಶ್ರೀ ಮಹಾವಿಷ್ಣು  ಸೇವಾ ಸಮಿತಿಯ ಮಹಾಸಭೆಯು ಪುದುಕೋಳಿ ಶ್ರೀ ಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ  ಶ್ರೀ ಕ್ಷೇತ್ರದಲ್ಲಿ  ಜರಗಿತು. ಕ್ಷೇತ್ರದ ಮಾಜಿ ಆಡಳಿತ ಮುಕ್ತೇಸರರಾದ ಗೋಪಾಲ ಭಟ್ ಪಿ ಎಸ್ ಇವರು ಸಭೆಯನ್ನು ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ, ರಾಮ ಕಾರ್ಮಾರು ಇವರು ಸಮಿತಿಯ ಗತ ವರದಿಯನ್ನು ಸಭೆಯ ಮುಂದಿಟ್ಟರು. ಸಮಿತಿಯ ಕೋಶಾಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಲೆಕ್ಕಪತ್ರವನ್ನು ಮಂಡಿಸಿದರು. ಟ್ರಸ್ಟಿ ಉದಯ ಪಣಿಕ್ಕರ್, ನರಸಿಂಹ ಭಟ್ ಕಾರ್ಮಾರು, ರಂಜಿತ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು. 

ಮುಂದಿನ ಅವಧಿಗೆ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ನರಸಿಂಹ ಭಟ್ ಕಾರ್ಮಾರು, ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ವಳಕುಂಜ, ಕೋಶಾಧಿಕಾರಿಗಳಾಗಿ ರಾಮ ಕೆ ಕಾರ್ಮಾರು ಇವರನ್ನು ಆಯ್ಕೆ ಮಾಡಲಾಯಿತು. ಯುವಕ ವೃಂದದ ಅಧ್ಯಕ್ಷರಾದ ವಿಜಯಕುಮಾರ್ ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ಗೋಕುಲ್ ಶರ್ಮ ಕಾರ್ಮಾರು ವಂದಿಸಿದರು.

Post a Comment

0 Comments